ಪಡಿತರ ಹಂಚದೆ ಗ್ರಾಹಕರಿಗೆ ಮೋಸ ಮಾಡಿದವರಿದ್ದರೆ ಅವರಿಗೆ ಮುಂದಿನ ತಿಂಗಳಿನ ಆಹಾರಧಾನ್ಯ ನೀಡುವುದಿಲ್ಲ ಎಂದು ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಪಡಿತರ ಆಹಾರ ವಿತರಣೆ ಸರಿಯಾಗಿ ಆಗುತ್ತಿದೆಯೋ ಇಲ್ಲವೋ ಗಮನಿಸಲು ಅಧಿಕಾರಿಗಳ 8-10 ತಂಡಗಳನ್ನು ಮಾಡಿ ಪರಿಶೀಲಿಸಲು ಸೂಚಿಸಲಾಗಿದೆ. ದಿನಸಿ ಅಂಗಡಿಗಳಲ್ಲಿ ಆಹಾರ ಧಾನ್ಯಗಳ ದರ ಫಲಕ ಹಾಕಬೇಕು. ದುಬಾರಿ ದರಕ್ಕೆ ಮಾರಾಟ ಆಗದಂತೆ ಕ್ರಮ ವಹಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಆಹಾರ ಧಾನ್ಯ ಪೂರೈಸಲು ಹಾಗೂ ಈ ಬಗ್ಗೆ ನ್ಯಾಯಬೆಲೆ ಅಂಗಡಿಗಳ ಎದುರು ಮಾಹಿತಿ ಫಲಕ ಹಾಕಲು ಸಹ ಆದೇಶಿಸಲಾಗಿದೆ ಎಂದು ಸಚಿವ ಗೋಪಾಲಯ್ಯ ಹೇಳಿದರು.
ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಆಹಾರ ಧಾನ್ಯ
Please follow and like us: