ಪಡಿತರ ಚೀಟಿ ಇಲ್ಲದವರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ

ಬೆಂಗಳೂರು: ಪಡಿತರ ಚೀಟಿ ಇಲ್ಲದವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇಂದಿನಿAದ ಮೇ ೩೦ ರ ವರೆಗೆ ಪಡಿತರ ಚೀಟಿ ಇಲ್ಲವರಿಗೂ ಸರ್ಕಾರಿ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ನಡೆಯಲಿದೆ. ಆಹಾರ ಸಚಿವ ಕೆ. ಗೋಪಾಲಯ್ಯ ಇಂದು ಪಡಿತರ ಅಂಗಡಿಗಳಿಗೆ ಭೇಟಿ ನೀಡಿ ಪಡಿತರ ವಿತರಣಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಬಳಿಕ ಮಾತನಾಡಿದ ಅವರು ಪ್ರತಿ ಒಬ್ಬ ವ್ಯಕ್ತಿಗೆ ೫ ಕೆ.ಜಿ. ಅಕ್ಕಿ, ಎರಡು ಕೆ.ಜಿ ಬೇಳೆ ವಿತರಿಸಲಾಗುತ್ತಿದೆ ಎಂದಿದ್ದಾರೆ. ಅಲ್ಲದೇ ಪಡಿತರ ಚೀಟಿ ಇಲ್ಲದ ರಾಜ್ಯ ಹಾಗೂ ಹೊರ ರಾಜ್ಯದ ಕಾರ್ಮಿಕರು, ಅಂತರ್ ಜಿಲ್ಲೆಯವರು ಆಧಾರ್ ಕಾರ್ಡ್ ತೋರಿಸಿ ಜೂನ್ ೧೦ ರ ವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಮತ್ತು ಬೇಳೆ ತೆಗೆದುಕೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕ್ವಾರಂಟೈನ್‌ಗೆ ಹೋಗಲು ಹಣವಿಲ್ಲದೆ ಕುಟುಂಬದ ಪರದಾಟ

Tue May 26 , 2020
ಬೆಂಗಳೂರು:ಲಾಕ್‌ಡೌನ್‌ನಿಂದ ಬಂದ್ ಆಗಿದ್ದ ವಿಮಾನಯಾನ ಶುರುವಾಗಿದೆ. ಇಂದು ರಾಜ್ಯದಲ್ಲಿ ದೇಶಿ ವಿಮಾನಗಳ ಹಾರಾಟ ಪ್ರಾರಂಭವಾಗಿದ್ದು, ಇಂದೋರ್‌ನಿಂದ ಆಗಮಿಸಿದ ಕುಟುಂಬವೊಂದು ಹೋಟೆಲ್ ಕ್ವಾರಂಟೈನ್‌ಗೆ ಹೋಗಲು ಹಣವಿಲ್ಲದೆ ಒಂದು ದಿನದಿಂದ ವಿಮಾನ ನಿಲ್ದಾಣದಲ್ಲಿದ್ದು ಪರದಾಡುವಂತಾಗಿದೆ. ಇಂದೋರ್‌ನಿಂದ ದೆಹಲಿಗೆ ಆಗಮಿಸಿ ದೆಹಲಿಯಿಂದ ನಿನ್ನೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದ ಐದು ಜನರ ಬಡ ಕುಟುಂಬ ಹೋಟೆಲ್ ಕ್ವಾರಂಟೈನ್‌ಗೆ ಹಣ ಭರಿಸಲು ಸಾಧ್ಯವಾಗದೆ ಪರಿತಪಿಸುತ್ತಿದೆ. ನಿನ್ನೆಯಿಂದ ವಿಮಾನ ನಿಲ್ದಾಣದ ಒಳಗಡೆ ಇರುವ ಕುಟುಂಬ ಹೊರ ಬರಲು […]

Advertisement

Wordpress Social Share Plugin powered by Ultimatelysocial