ಪರಿಹಾರ ಬಿಡುಗಡೆ ಮಾಡಿ ಸಿಎಂ ಆದೇಶ

ನೀರಿಗಿಳಿದು ಜಲಸಮಾಧಿಯಾದ ಏಳು ಜನರ ಕುಟುಂಬಕ್ಕೆ ಮುಖ್ಯಮಂತ್ರಿಗಳ ತುರ್ತು ಪರಿಹಾರ ನಿಧಿಯಿಂದ ಹಣ ನೀಡಲು ಸಿಎಂ ಬಿಎಸ್‌ವೈ ಆದೇಶ ಹೊರಡಿಸಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ನಿನ್ನೆ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಏಳು ಜನರು ನೀರಿಗೆ ಬಿದ್ದು ಮೃತಪಟ್ಡಿದ್ದಾರೆ. ಅದರಲ್ಲಿ ನಾಗಮಂಗಲ ತಾಲೂಕಿನ ಬೀರನಹಳ್ಳಿಯ ಗೀತಾ, ಸವಿತಾ, ಸೌಮ್ಯ ಅವರ ಕುಟುಂಬಕ್ಕೆ ತಲಾ ಐದು ಲಕ್ಷದಂತೆ ೧೫ ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದಾರೆ. ಇನ್ನು ನಾಗಮಂಗಲ ತಾಲೂಕಿನ ಚೋಳಸಂದ್ರ ಗ್ರಾಮದ ರಶ್ಮಿ, ಇಂಚರಾ, ಕೆ.ಆರ್.ಪೇಟೆ ತಾಲೂಕಿನ ಹುಳಿಗಂಗನ ಹಳ್ಳಿಯ ಅಭಿಷೇಕ್ ಮತ್ತು ಕೆ.ಆರ್.ಪೇಟೆ ತಾಲೂಕಿನ ಆದಿಹಳ್ಳಿ ಗ್ರಾಮದ ಕುಮಾರ್ ಕುಟುಂಬಕ್ಕೆ ತಲಾ ೨ ಲಕ್ಷದಂತೆ ೮ ಲಕ್ಷ ಸೇರಿ ಒಟ್ಟು ೨೩ ಲಕ್ಷ ರೂಪಾಯಿಗಳನ್ನು ಸಿಎಂ ಪರಿಹಾರ ನಿಧಿಯಿಂದ ಬಿಡುಗಡೆ ಮಾಡಿ ಸಿಎಂ ಆದೇಶ ಹೊರಡಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಅಧಿಕಾರ ಸ್ವೀಕರಿಸಿದಾಗ ಉತ್ತಮ ಕಾರ್ಯ ಮಾಡಬೇಕು

Mon Jun 15 , 2020
ಅಧಿಕಾರ ಸ್ವೀಕರಿಸಿದಾಗ ನಾವು ಉತ್ತಮ ಗುಣಮಟ್ಟದ ಕಾರ್ಯ ಮಾಡಬೇಕು ಆಗ ನಾವು ಸಮಾಜದಲ್ಲಿ ನಮ್ಮ ತನ ತಾನಾಗಿಯೆ ಹೆಚ್ಚಾಗುತ್ತದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರ್ ಹೇಳಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಮಾತನಾಡಿದ ಅವರು, ನೂತನ ಅಧ್ಯಕ್ಷರಾಗಿ ಬಂದ ಪ್ರಸನ್ನ ಕುಮಾರ್‌ರವರಿಗೆ ಅಭಿನಂದಿಸಿದರು. ಈ ವೇಳೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ರವಿನಾಕಲಗೊಡು ಮಾತನಾಡಿ ಅಧಿಕಾರಕೊಸ್ಕರ ನಾವು ಯಾವತ್ತೂ ಇರಬಾರದು ನಮ್ಮ ಚಟುವಟಿಕೆ ಸದಾ […]

Advertisement

Wordpress Social Share Plugin powered by Ultimatelysocial