ಪಶ್ಚಿಮಘಟ್ಟದ ಕುದುರೆಮುಖ ಅರಣ್ಯ ವ್ಯಾಪ್ತಿಯಲ್ಲಿ ಗುಡ್ಡ ಕುಸಿತ

ಕಳೆದ ವರ್ಷ ಪಶ್ಚಿಮಘಟ್ಟದ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಹಲವೆಡೆ ಗುಡ್ಡ ಕುಸಿದು ಅಪಾರ ಹಾನಿ ಸಂಭವಿಸಿತ್ತು. ಈ ಬಾರಿ ಅದೇ ಪರ್ವತ ಶ್ರೇಣಿಯ ಕುದುರೆಮುಖ ಅರಣ್ಯ ವ್ಯಾಪ್ತಿಯಲ್ಲಿ ಬಂಡೆ ಸಮೇತ ಗುಡ್ಡ ಕುಸಿದಿದೆ.ದಿಡುಪೆ ಹೆಬ್ಬಾರ್ತಿಕಲ್ ಗುಡ್ಡದಲ್ಲಿ ಬಂಡೆ ಉರುಳಿದ ಸದ್ದು ನಾಲ್ಕೈದು ಕಿ.ಮೀ. ದೂರದ ಮಲವಂತಿಗೆ ಗ್ರಾಮಕ್ಕೆ ಕೇಳಿಸಿದ್ದು, ಮನೆಯಿಂದ ಹೊರಬಂದು ನೋಡಿದಾಗ ಹೊಗೆಯಾಡಿದ ವಾತಾವರಣ ಕಂಡಿದೆ. ಇಲ್ಲಿ ೧೦ಕ್ಕೂ ಅಧಿಕ ಮನೆಗಳಿವೆ.೮ ದಿನಗಳಿಂದ ಘಾಟ್ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮೈದಾಡಿ ಘಾಟಿ ಕೆಳಗಿರುವ ಹೆಬ್ಬಾರ್ತಿಕಲ್ ಗುಡ್ಡದ ಮಣ್ಣು ಸಡಿಲಗೊಂಡು ಘಟನೆ ಸಂಭವಿಸಿರಬಹುದು. ಕಳೆದ ಬಾರಿ ಇದೇ ವ್ಯಾಪ್ತಿಯ ತುಲುಪುಲೆ ಬದಿ ಗುಡ್ಡ ಜರಿದು ತೋಟಗಳಿಗೆ ಹಾನಿಯಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಗಂಗಾವತಿ, ಶ್ರೀರಾಮನಗರದಲ್ಲಿ ಲಾಕ್‌ಡೌನ್

Mon Jul 20 , 2020
ಕೊರೊನಾ ಹಾವಳಿ ಜಾಸ್ತಿಯಾಗ್ತಿರೊ ಹಿನ್ನೆಲೆಯಲ್ಲಿ ಗಂಗಾವತಿ, ಶ್ರೀರಾಮನಗರದಲ್ಲಿ ಇಂದು ಮಧ್ಯರಾತ್ರಿಯಿಂದ ಲಾಕ್‌ಡೌನ್ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಅವರು ಹೇಳಿದ್ದಾರೆ.ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನ ದಿನಕ್ಕೂ ಜಾಸ್ತಿ ಆಗ್ತಿದೆ. ಸೋಂಕು ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಹಾಟ್‌ಸ್ಪಾಟ್‌ಗಳಾಗಿರುವ ಗಂಗಾವತಿ ಹಾಗೂ ಶ್ರೀರಾಮನಗರದಲ್ಲಿ ಲಾಕ್‌ಡೌನ್ ಮಾಡಲಾಗುವುದು. ಹಾಗಾಗಿ ಮುಂದಿನ 10 ದಿನದವರೆಗೆ ಲಾಕ್ ಡೌನ್ ಜಾರಿಯಾಗಲಿದೆ ಎಂದು  ಸಚಿವರು ತಿಳಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial