ಪಾದರಾಯನಪುರಕ್ಕೆ ಗೃಹ ಸಚಿವ ಭೇಟಿ

ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ೫೯ ಮಂದಿಯನ್ನು ಬಂಧಿಸಲಾಗಿದ್ದು, ೫ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ ಎಂದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿದ ಅವರು ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ೫೯ ಮಂದಿಯನ್ನು ಬಂಧಿಸಲಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ. ಇನ್ನೂ ಕರ‍್ಯಾಚರಣೆ ಮುಂದುವರೆದಿದ್ದು, ಎಲ್ಲರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಬಂಧಿತರಾಗಿರೋ ಆರೋಪಿಗಳ ಮೇಲೆ ಐಪಿಸಿ ಸೆಕ್ಸನ್ ೩೦೭,೧೮೮,೩೫೩ ಹಾಗೂ ಎನ್‌ಡಿಎಮ್ ಕಾಯ್ದೆ ಅಡಿ ೫೧, ೫೨, ೫೪ ಸೆಕ್ಷನ್‌ಗಳು ಸೇರಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು, ಕೊಲೆ ಯತ್ನ ಇಂತಹ ಐದು ಕೇಸ್‌ಗಳನ್ನು ಹಾಕಲಾಗಿದೆ. ಸದ್ಯ ಕೆಎಸ್ ಆರ್ ಪಿ ತುಕಡಿ ಸೇರಿದಂತೆ ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದೆ..ಸದ್ಯ ಪಾದರಾಯನಪುರ ಬೂದಿ ಮುಚ್ಚಿದ ಕೆಂಡಂತಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಸಹಾಯ ಹಸ್ತ ನೀಡಿದ ಶಾಸಕರ ಮೊಮ್ಮಗಳು

Mon Apr 20 , 2020
ರಾಯಚೂರು: ಕೊರೋನಾ ಮಹಮಾರಿಗೆ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಉಳ್ಳವರು ನಾವಾಯ್ತು ನಮ್ಮ ಮನೆಯಾಯ್ತು ಎಂದು ಕುಳಿತಿರುವಾಗ ಇಲ್ಲೊಬ್ಬ ಜನನಾಯಕಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಪ್ರತಿ ಹಳ್ಳಿ-ಹಳ್ಳಗಳಿಗೆ ತೆರಳಿ ಹಸಿದ ಕುಟುಂಬಗಳಿಗೆ ಅಕ್ಕಿ, ಬೆಳೆ, ಸಕ್ಕರೆ, ಎಣ್ಣೆ ಹಾಗೂ ತರಕಾರಿಗಳನ್ನು ಸಹ ನೀಡುವ ಮೂಲಕ ನೊಂದವರ ಬದುಕಿಗೆ ಆಶಾಕಿರಣವಾಗುತ್ತಿದ್ದಾರೆ. ಇವರು ಬೇರೆ ಯಾರೂ ಅಲ್ಲ ಅವರು ದಿವಂಗತ ಮಾಜಿ ಸಂಸದ ಎ.ವೆಂಕಟೇಶ ನಾಯಕರ […]

Advertisement

Wordpress Social Share Plugin powered by Ultimatelysocial