ಇದು ಬಿಜೆಪಿ ಸರ್ಕಾರ, ನಾವು ಪೈಸೆ ಪೈಸೆಗೂ ಕೂಡ ಲೆಕ್ಕ ಕೊಟ್ಟೇ ಕೊಡ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಸಿದ್ದರಾಮಯ್ಯ ಟ್ವೀಟ್ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಹಿಂದಿನ ಸರ್ಕಾರದಂತಲ್ಲ. ಪ್ರತಿ ಖರ್ಚಿಗೂ ಎಲ್ಲರೂ ಲೆಕ್ಕ ಕೊಡಲೇಬೇಕು, ವಿಧಾನಸೌಧದಲ್ಲಿ ಚರ್ಚೆ ಆಗಲೇಬೇಕು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಏನಾದ್ರೂ ಲೆಕ್ಕಕೊಡದ ಗುಂಗಿನಲ್ಲಿ ಇರಬಹುದೇನೋ. ಸಿದ್ದರಾಮಯ್ಯ ಅವರ ಗುಂಗಲ್ಲಿ ಇದ್ರೆ ಅದರಿಂದ ಹೊರಬರಲಿ. ನನ್ನ ಇಲಾಖೆಯಿಂದಲೂ 3೦೦ ಕೋಟಿ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆ್ಯಕ್ಟ್ ನಲ್ಲಿ ಬಿಡುಗಡೆ ಮಾಡಿದ್ದೇನೆ ಅದರ ಲೆಕ್ಕನೂ ಕೊಡ್ತೇವೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಪೈಸೆ ಪೈಸೆಗೂ ಕೂಡ ಲೆಕ್ಕ ಕೊಡ್ತೇವೆ
Please follow and like us: