ಪೊಲೀಸರಿಂದ ರಾಜ್ ಹಾಡಿನ ಮೂಲಕ ಕೊರೊನಾ ಜಾಗೃತಿ ಸಂದೇಶ

ವರನಟ ಡಾ. ರಾಜ್​ಕುಮಾರ್​ ಹುಟ್ಟುಹಬ್ಬದಂದು ಬೆಂಗಳೂರು ಸಿಟಿ ಪೊಲೀಸರು ಟ್ವಿಟ್ಟರ್​​ನಲ್ಲಿ ವಿಶೇಷವಾಗಿ ಮನವಿ ಮಾಡಿದ್ದಾರೆ. ಕೊರೋನಾ ವೈರಸ್​​ ಹಿನ್ನಲೆ ಎಚ್ಚರಿಕೆಯಿಂದ ಇರುವಂತೆ ಹಾಡಿನ ಮೂಲಕ ಸಂದೇಶ ನೀಡಿದ್ದಾರೆ. 1976ರಲ್ಲಿ ‘ಪ್ರೇಮದ ಕಾಣಿಕೆ’ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದ ‘ಬಾನಿಗೊಂದು ಎಲ್ಲೆ ಎಲ್ಲಿದೆ’ ಹಾಡು ಇಂದಿಗೂ ಹೆಚ್ಚು ಜನಪ್ರಿಯವಾಗಿದೆ. ಇದೀಗ ಕೊರೋನಾ ಮಹಾಮಾರಿಯ ಕುರಿತು ಜಾಗೃತಿ ಮೂಡಿಸಲು ಬೆಂಗಳೂರು ಸಿಟಿ ಪೊಲೀಸರು ಈ ಹಾಡನ್ನು ಬಳಸಿಕೊಂಡು ಎಚ್ಚರಿಕೆಯ ಘಂಟೆ ಸಾರಿದ್ದಾರೆ.
ಕೊರೋನಾವೆಂಬ ಮಾರಿ ಕುದುರೆ ಏಕೆ ಏರುವೆ. ಮನೆಯಿಂದ ಹೊರಗೆ ಸುಮ್ಮನೇಕೆ ನೀನು ಅಲೆಯುವೆ? ನಿಧಾನಿಸು ನಿಧಾನಿಸು..!’ ಇನ್ನೂ ಪೋಸ್ಟರ್​ನಲ್ಲಿ ‘ಕೊರೋನಾಗೊಂದು ಔಷಧಿ ಎಲ್ಲಿದೆ? ಮನೆಯೊಳಗೆ ನಾವು ಇರಲೇ ಬೇಕಿದೆ. ಏಕೆ ಹೊರಗೆ ಹೋಗುವೆ ನಿಧಾನಿಸು.. ನಿಧಾನಿಸು’ ಎಂದು ಟ್ವೀಟ್​ ಮೂಲಕ ಜಾಗೃತಿ ಸಾರಿದ್ದಾರೆ. ಇನ್ನೂ ರಕ್ಷಿತ್​ ಶೆಟ್ಟಿ ನಟನೆಯ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದಲ್ಲಿನ ‘ಚರಿತ್ರೆ ಸೃಷ್ಠಿಸುವ ಅವತಾರ’ ಹಾಡನ್ನು ಬಳಸಿಕೊಂಡು ಕೊರೋನಾ ಕುರಿತು ಜಾಗೃತಿ ಮೂಡಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್​ನಲ್ಲಿ ಸಿಟಿ ಪೊಲೀಸ್​​ ಟ್ವೀಟ್​ ಕೂಡ ಮಾಡಿದ್ದು, ಇದು ಚರಿತ್ರೆ ಸೃಷ್ಠಿಸೊ ಅವತಾರ, ಮಾಸ್ಕ್​ ಅಪ್​​ ಅದುವೆ ಸಿದ್ಧಾಂತ, ಹ್ಯಾಂಡ್​​​ ವಾಷ್​​​, ಈಗಿನ ವೇದಾಂತ ಎಂದು ಹೇಳಿದ್ದಾರೆ. ಇನ್ನು ಪೋಸ್ಟರ್​ನಲ್ಲಿ ‘ಕೇಳಿ ಕಾದಿರುವ ಬಾಂಧವರೇ, ಭುವಿಯಲ್ಲಿ ಕೊರೋನಾ ಅರಿತವರೇ, ಮನೆಯಲ್ಲಿ ಇರಿ, ಸುರಕ್ಷಿತವಾಗಿರಿ, ಹೊರ ಬಂದರೇ ಅಷ್ಟೇ ಎಂದು ಬೆಂಗಳೂರು ಸಿಟಿ ಪೊಲೀಸರು ಜಾಗೃತಿ ಮೂಡಿಸಿದ್ದಾರೆ. ನಟ ರಕ್ಷಿತ್​ ಶೆಟ್ಟಿಗು ಕೂಡ ಟ್ಯಾಗ್​ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ನಾಸಾದಿಂದ ತಯಾರಾಯ್ತು 'ವಿಟಲ್'

Fri Apr 24 , 2020
ವಾಷಿಂಗ್ಟನ್: ಕರೊನಾ ಸೋಂಕಿತರಿಗೆ ವಿಶೇಷ ಹಾಗೂ ಪರಿಣಾಮಕಾರಿ ರೀತಿಯಲ್ಲಿ ಚಿಕಿತ್ಸೆ ನೀಡುವಂಥ ವೆಂಟಿಲೇಟರ್ ಅನ್ನ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಅಭಿವೃದ್ಧಿ ಪಡಿಸಿದೆ. ಇದು ಕರೊನಾ ಸೋಂಕಿತರಿಗೆ ಅಗತ್ಯವಾಗಿ ಬೇಕಾಗಿರುವಂಥ ಅಧಿಕ ಒತ್ತಡದ ವೆಂಟಿಲೇಟರ್ ಆಗಿದ್ದು ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಇದರಿಂದ ಸಾಧ್ಯ ಎಂದು ನಾಸಾ ಹೇಳಿದೆ. ಇದಕ್ಕೆ ‘ವಿಟಲ್ (ವೆಂಟಿಲೇಟರ್ ಇಂಟರ್ವೆನ್ಷನ್ ಟೆಕ್ನಾಲಜಿ) ಎಂದು ಹೆಸರಿಸಲಾಗಿದೆ. ಇದನ್ನು ಈಗಾಗಲೇ ನ್ಯೂಯಾರ್ಕ್ನ ಇಕಾನ್ ಸ್ಕೂಲ್ ಆಫ್ ಮೆಡಿಸಿನ್ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅಲ್ಲಿ […]

Advertisement

Wordpress Social Share Plugin powered by Ultimatelysocial