ವರನಟ ಡಾ. ರಾಜ್ಕುಮಾರ್ ಹುಟ್ಟುಹಬ್ಬದಂದು ಬೆಂಗಳೂರು ಸಿಟಿ ಪೊಲೀಸರು ಟ್ವಿಟ್ಟರ್ನಲ್ಲಿ ವಿಶೇಷವಾಗಿ ಮನವಿ ಮಾಡಿದ್ದಾರೆ. ಕೊರೋನಾ ವೈರಸ್ ಹಿನ್ನಲೆ ಎಚ್ಚರಿಕೆಯಿಂದ ಇರುವಂತೆ ಹಾಡಿನ ಮೂಲಕ ಸಂದೇಶ ನೀಡಿದ್ದಾರೆ. 1976ರಲ್ಲಿ ‘ಪ್ರೇಮದ ಕಾಣಿಕೆ’ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದ ‘ಬಾನಿಗೊಂದು ಎಲ್ಲೆ ಎಲ್ಲಿದೆ’ ಹಾಡು ಇಂದಿಗೂ ಹೆಚ್ಚು ಜನಪ್ರಿಯವಾಗಿದೆ. ಇದೀಗ ಕೊರೋನಾ ಮಹಾಮಾರಿಯ ಕುರಿತು ಜಾಗೃತಿ ಮೂಡಿಸಲು ಬೆಂಗಳೂರು ಸಿಟಿ ಪೊಲೀಸರು ಈ ಹಾಡನ್ನು ಬಳಸಿಕೊಂಡು ಎಚ್ಚರಿಕೆಯ ಘಂಟೆ ಸಾರಿದ್ದಾರೆ.
ಕೊರೋನಾವೆಂಬ ಮಾರಿ ಕುದುರೆ ಏಕೆ ಏರುವೆ. ಮನೆಯಿಂದ ಹೊರಗೆ ಸುಮ್ಮನೇಕೆ ನೀನು ಅಲೆಯುವೆ? ನಿಧಾನಿಸು ನಿಧಾನಿಸು..!’ ಇನ್ನೂ ಪೋಸ್ಟರ್ನಲ್ಲಿ ‘ಕೊರೋನಾಗೊಂದು ಔಷಧಿ ಎಲ್ಲಿದೆ? ಮನೆಯೊಳಗೆ ನಾವು ಇರಲೇ ಬೇಕಿದೆ. ಏಕೆ ಹೊರಗೆ ಹೋಗುವೆ ನಿಧಾನಿಸು.. ನಿಧಾನಿಸು’ ಎಂದು ಟ್ವೀಟ್ ಮೂಲಕ ಜಾಗೃತಿ ಸಾರಿದ್ದಾರೆ. ಇನ್ನೂ ರಕ್ಷಿತ್ ಶೆಟ್ಟಿ ನಟನೆಯ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದಲ್ಲಿನ ‘ಚರಿತ್ರೆ ಸೃಷ್ಠಿಸುವ ಅವತಾರ’ ಹಾಡನ್ನು ಬಳಸಿಕೊಂಡು ಕೊರೋನಾ ಕುರಿತು ಜಾಗೃತಿ ಮೂಡಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಸಿಟಿ ಪೊಲೀಸ್ ಟ್ವೀಟ್ ಕೂಡ ಮಾಡಿದ್ದು, ಇದು ಚರಿತ್ರೆ ಸೃಷ್ಠಿಸೊ ಅವತಾರ, ಮಾಸ್ಕ್ ಅಪ್ ಅದುವೆ ಸಿದ್ಧಾಂತ, ಹ್ಯಾಂಡ್ ವಾಷ್, ಈಗಿನ ವೇದಾಂತ ಎಂದು ಹೇಳಿದ್ದಾರೆ. ಇನ್ನು ಪೋಸ್ಟರ್ನಲ್ಲಿ ‘ಕೇಳಿ ಕಾದಿರುವ ಬಾಂಧವರೇ, ಭುವಿಯಲ್ಲಿ ಕೊರೋನಾ ಅರಿತವರೇ, ಮನೆಯಲ್ಲಿ ಇರಿ, ಸುರಕ್ಷಿತವಾಗಿರಿ, ಹೊರ ಬಂದರೇ ಅಷ್ಟೇ ಎಂದು ಬೆಂಗಳೂರು ಸಿಟಿ ಪೊಲೀಸರು ಜಾಗೃತಿ ಮೂಡಿಸಿದ್ದಾರೆ. ನಟ ರಕ್ಷಿತ್ ಶೆಟ್ಟಿಗು ಕೂಡ ಟ್ಯಾಗ್ ಮಾಡಿದ್ದಾರೆ.
ಪೊಲೀಸರಿಂದ ರಾಜ್ ಹಾಡಿನ ಮೂಲಕ ಕೊರೊನಾ ಜಾಗೃತಿ ಸಂದೇಶ
Please follow and like us: