ಪೋರ್ಚುಗೀಸ್ ಕಾಲದ ರಸ್ತೆ ಅಭಿವೃದ್ಧಿಪಡಿಸಲು ಗೋವಾ ಅಸ್ತು, ಹರ್ಷ ವ್ಯಕ್ತಪಡಿಸಿದ ಸ್ಥಳೀಯರು

ಬೆಳಗಾವಿ: ಪೋರ್ಚುಗೀಸ್ ಕಾಲದ ರಸ್ತೆ ಅಭಿವೃದ್ಧಿಪಡಿಸಲು ಗೋವಾ ಅಸ್ತು, ಹರ್ಷ ವ್ಯಕ್ತಪಡಿಸಿದ ಸ್ಥಳೀಯರು

ಬೆಳಗಾವಿ: ಹಲವು ವರ್ಷಗಳಿಂದ ಸಂಚಾರ ಸ್ಥಗಿತಗೊಂಡಿದ್ದ ಪೋರ್ಚುಗೀಸ್ ಕಾಲದ ರಸ್ತೆಯನ್ನು ಅಭಿವೃದ್ಧಿಪಡಿಸಲು ಗೋವಾ ಸರ್ಕಾರ ಹಸಿರು ನಿಶಾನೆ ತೋರಿದ್ದು, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪರ್ವಾಡ, ಕಣಕುಂಬಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯು ಗೋವಾದ ಸತ್ರೆಯಿಂದ ಕರ್ನಾಟಕದ ಪರ್ವಾಡ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತದೆ. ಗೋವಾ ಸರ್ಕಾರದ ಈ ನಿರ್ಧಾರವು ಪರ್ವಾಡ ಗ್ರಾಮಸ್ಥರು ಒಂದು ಗಂಟೆಯೊಳಗೆ ಕಾಲ್ನಡಿಗೆಯಲ್ಲಿ ಗೋವಾ ಗಡಿಯನ್ನು ತಲುಪಲು ಸಹಾಯ ಮಾಡುತ್ತದೆ ಮತ್ತು ಅವರ ಸಮಯ ಹಾಗೂ ಹಣವನ್ನು ಉಳಿಸುತ್ತದೆ.

ಪರ್ವಾಡ್ ಮತ್ತು ಸತ್ರೆ ನಡುವೆ ಮಹದಾಯಿ ನದಿಗೆ ಪೋರ್ಚುಗೀಸ್ ರಸ್ತೆ ಮತ್ತು ಸೇತುವೆಯ ಅಭಿವೃದ್ಧಿಗೆ ಗೋವಾ ಸರ್ಕಾರ ಇತ್ತೀಚೆಗೆ ಅನುಮೋದನೆ ನೀಡಿತ್ತು. ಆದರೆ, ಗೋವಾ ರಾಜ್ಯ ವ್ಯಾಪ್ತಿಯಲ್ಲಿರುವ ಪುರಾತನ ರಸ್ತೆಯನ್ನು ಮಾತ್ರ ಅಭಿವೃದ್ಧಿಪಡಿಸಲಾಗುತ್ತಿದೆ. “ಈ ರಸ್ತೆಯನ್ನು ಅಭಿವೃದ್ಧಿಪಡಿಸಿದರೆ, ಪರ್ವಾಡದ ಗ್ರಾಮಸ್ಥರು 10 ರಿಂದ 12 ಕಿಮೀ ದೂರ ನಡೆದು ಗೋವಾ ಗಡಿಯನ್ನು ತಲುಪಬಹುದು” ಎಂದು ಮೂಲಗಳು ತಿಳಿಸಿವೆ.

‘ಕಣಕುಂಬಿ ಮತ್ತು ಪರ್ವಾಡದ ಗ್ರಾಮಸ್ಥರು ಭತ್ತದ ಕೃಷಿಗಾಗಿ ಸತ್ರೆ ಮೂಲಕ ಗೋವಾಕ್ಕೆ ಹೋಗುತ್ತಾರೆ. ಅವರು ತಮ್ಮ ಆದಾಯದ ಮೂಲಕ್ಕಾಗಿ ಗೋವಾದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಪುರಾತನ ಪೋರ್ಚುಗೀಸ್ ರಸ್ತೆ ಮತ್ತು ಮಹದಾಯಿ ನದಿಯ ಹಳೆಯ ಸೇತುವೆ ದಯನೀಯ ಸ್ಥಿತಿಯಲ್ಲಿದೆ, ಇದರಿಂದಾಗಿ ಗ್ರಾಮಸ್ಥರು ಅದನ್ನು ಬಳಸುತ್ತಿಲ್ಲ, ‘ಎಂದು ಅವರು ಹೇಳಿದ್ದಾರೆ.

ಪೋರ್ಚುಗೀಸ್ ರಸ್ತೆಯನ್ನು ಅಭಿವೃದ್ಧಿಪಡಿಸಲು ಸತ್ರೆ ಗ್ರಾಮಸ್ಥರು ಗೋವಾ ಸರ್ಕಾರವನ್ನು ಒತ್ತಾಯಿಸಿದ್ದರು. ಈಗ ಗೋವಾ ಸರ್ಕಾರ ಅನುಮತಿ ನೀಡಿದ್ದು, ಗೋವಾದ ಗಡಿ ಪ್ರದೇಶಗಳಲ್ಲಿ ವಾಸಿಸುವ ಗ್ರಾಮಸ್ಥರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬ್ರಿಟಿಷರ ವಿರುದ್ಧ ಚಳವಳಿಗೆ ಹುಟ್ಟಿದ ಸಂಘಟನೆಯೇ ಕಾಂಗ್ರೆಸ್ ಪಕ್ಷ :ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

Tue Dec 28 , 2021
ಮಂಡ್ಯ :- ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಚಳವಳಿಗೆ ಹುಟ್ಟಿದ ಸಂಘಟನೆಯೇ ಕಾಂಗ್ರೆಸ್ ಪಕ್ಷ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಶಿವಪುರದಲ್ಲಿ ನಡೆದ 137 ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಸ್ಥಾಪನೆಯಾಗಿ 136 ವರ್ಷ ಕಳೆದಿದೆ ಇಂದು 137ನೇ ವರ್ಷಾಚರಣೆ ಮಾಡ್ತಿದ್ದೇವೆ. ಸ್ವಾತಂತ್ರ್ಯ ಹೋರಾಟ ಮಾಡಲಿಕ್ಕೆ ಮಾತ್ರ ಹುಟ್ಟಿದ್ದಲ್ಲ ಕಾಂಗ್ರೆಸ್ ಪಕ್ಷ ಭಾರತೀಯರ ಕಷ್ಟ […]

Advertisement

Wordpress Social Share Plugin powered by Ultimatelysocial