ಮೈಸೂರು: ಕೊರೊನಾ ಹಿನ್ನಲೆ ಕೆಎಸ್ಆರ್ಟಿಸಿ ಹಳೆ ಬಸ್ಸೊಂದನ್ನು ಆಧುನೀಕರಣಗೋಳಿಸಿ, ಅದನ್ನು ಸಂಚಾರಿ ಫೀವರ್ ಕ್ಲಿನಿಕ್ ಸೇವೆಗೆ ಇಳಿಸಲಾಗಿದೆ. ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಈ ಫೀವರ್ ಕ್ಲಿನಿಕ್ಗೆ ಚಾಲನೆ ನೀಡಿದರು.
ಈ ಬಸ್ಸಿನಲ್ಲಿ ಆಸ್ಪತ್ರೆಯಲ್ಲಿರುವ ಸೌಲಭ್ಯಗಳೆಲ್ಲವೂ ಇವೆ. ವೈದ್ಯಾಧಿಕಾರಿಗಳು, ನರ್ಸ್ಗಳು, ಟೇಬಲ್, ಫ್ಯಾನ್ ಹಾಗೂ ರೋಗಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರಿನ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಜನರಿಗೆ ಸಹಾಯಕವಾಗಲು ಇಂತಹ ವ್ಯವಸ್ಥೆ ಕಲ್ಪಿಸಲಾಗಿದೆ.
ಫೀವರ್ ಕ್ಲಿನಿಕ್ ಸೇವೆಗೆ ಚಾಲನೆ
Please follow and like us: