ತಹಶೀಲ್ದಾರ್ ಚಂದ್ರಮೌಳೇಶ್ವರ ಹತ್ಯೆ ಖಂಡಿಸಿ ಪ್ರಗತಿಪರ ಸಂಘಟನೆಗಳು ನಿನ್ನೆ ಬಂಗಾರಪೇಟೆ ಬಂದ್ ಮಾಡಿದ್ದರು. ಇದೆ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಒಬ್ಬ ಪ್ರಾಮಾಣಿಕ ದಕ್ಷ ಅಧಿಕಾರಿಯನ್ನು ಕಳೆದು ಕೊಂಡಿರುವುದು ತಾಲ್ಲೂಕಿಗೆ ತುಂಬಲಾರದ ನಷ್ಟವಾಗಿದೆ. ಈ ಒಂದು ಕೊಲೆಯು ಅಲವು ಅನುಮಾನಗಳಿಗೆ ಹೆಡೆ ಮಾಡಿಕೊಟ್ಟಿದೆ. ಪ್ರಕರಣವನ್ನು ಸರ್ಕಾರ ಕೂಡಲೇ ಸಿಬಿಐ ಗೆ ವಹಿಸಬೇಕು ಮತ್ತು ಅವರ ಕುಟುಂಬಕ್ಕೆ 25 ಲಕ್ಷ ಪೋಷಣೆ ಅಲ್ಲದೆ ಒಂದು ಕೋಟಿ ರೂಪಾಯಿಗಳನ್ನು ನೀಡಬೇಕು, ಅವರ ಕುಟುಂಬದ ಇಬ್ಬರು ಸದ್ಯರಿಗೆ ಸರ್ಕಾರಿ ಉದ್ಯೋಗವನ್ನು ಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಬಂಗಾರಪೇಟೆ ಬಂದ್ ಮಾಡಿದ ಸಂಘಟನೆಗಳು
Please follow and like us: