ಲಾಕ್ ಡೌನ್ ನಡುವೆಯೂ ಗೆಳೆಯನ ಹುಟ್ಟು ಹಬ್ಬ ಆಚರಣೆ ನೆಪದಲ್ಲಿ ಮೋಜು ಮಸ್ತಿಗೆಂದು ಬೈಕ್ ನಲ್ಲಿ ಹೋಗಿದ್ದ 8 ಮಂದಿ ಪೈಕಿ ಮೂವರು ಜಲಸಮಾಧಿಯಾಗಿದ್ದಾರೆ. ಬರ್ತ್ ಡೇ ಬಾಯ್ ಕೂಡ ಸಾವಿಗೀಡಾಗಿದ್ದು ಸಂಭ್ರಮಾಚರಣೆ ದುರಂತ ಅಂತ್ಯ ಕಂಡಿದೆ. ಬೆಂಗಳೂರು ರಾಮಮೂರ್ತಿ ನಗರದ ಚಂದ್ರು(20) ರಾಜು(19) ಮತ್ತು ನವೀನ್ ಕುಮಾರ್(24) ಮೃತ ದುರ್ದೆವಿಗಳು ಎಂದು ತಿಳಿಒದು ಬಂದಿದೆ. ಬರ್ತ್ ಡೇ ಮಾಡಲೆಂದು ರಾಮಮೂರ್ತಿ ನಗರದಿಂದ ನವೀನ ಸೇರಿ ನಾಲ್ವರು ಯುವಕರು ಹಾಗೂ ನಾಲ್ವರು ಯುವತಿಯರು 4 ಬೈಕ್ ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿಗೆ ಲಾಂಗ್ ಡ್ರೈವ್ ಬಂದಿದ್ದರು . ಆರಂಭದಲ್ಲಿ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿದ್ದರು.ಆದ್ರೆ ಲಾಕ್ ಡೌನ್ ಹಿನ್ನೆಲೆ ದೇವಾಲಯದ ಬಾಗಿಲು ಹಾಕಿದ್ದರಿಂದ ಹೊರಗೇ ನಿಂತು ಕೃ ಮುಗಿದು ಬಳಿಕ ತಿಪ್ಪಗಾನಹಳ್ಳಿ ಕೆರೆಯ ಬಳಿ ಮೋಜು ಮಾಡಲು ಹೋಗಿದಾಗ ಈ ಅವಘಡ ಸಂಭವಿಸಿದೆ. ತಿಪ್ಪಗಾನಹಳ್ಳಿ ಕೆರೆಯಲ್ಲಿ ಆಟವಾಡಲೆಂದು 8 ಮಂದಿಯೂ ನೀರಿನಲ್ಲಿ ಇಳಿದಿದ್ದಾರೆ. ಈ ವೇಳೆ ಮೂವರು ಯುವಕರು ನೀರುಪಾಲಾಗಿದ್ದಾರೆ. ತಮ್ಮ ಕಣ್ಣ ಎದುರಲ್ಲೇ ಸ್ನೇಹಿತರು ನೀರು ಪಾಲಾಗುತ್ತಿದ್ದರೂ ಉಳಿಸಿಕೊಳ್ಳಲು ಆಗದ ಐವರು ಸ್ನೇಹಿತರು ಪರದಾಡಿದ್ದಾರೆ. ಇನ್ನೂ ಈ ಸಂಬಂಧ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲಿಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಮೃತ ದೇಹಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬರ್ತ್ ಡೇ ನೆಪದಲ್ಲಿ ಮೋಜು ಮಸ್ತಿಗೆ ಬಂದು ಮಸಣ ಸೇರಿದರು..!
Please follow and like us: