ಇಡೀ ವಶ್ವವೇ ಕೋವಿಡ್-19 ವೈರಸ್ ನಿಂದ ತತ್ತರಿಸಿದೆ ಇದರ ಮಧ್ಯೆ ‘ಫ್ಯುಸಾರಿಯಮ್ ವಿಲ್ಟ್ ಟಿಆರ್4’ ಎಂಬ ನೂತನ ಶಿಲೀಂಧ್ರ ವೈರಸ್ ನ ಮೂಲಕ ವಿಶ್ವಾದ್ಯಂತ ಬಾಳೆಹಣ್ಣಿನ ತೋಟಗಳ ಮೇಲೆ ದಾಳಿ ಮಾಡಿ, ಬೆಳೆಗಳನ್ನು ನಾಶಪಡಿಸುತ್ತಿದೆ. ವಿಶ್ವದಲ್ಲಿಯೇ ಅತೀ ಹೆಚ್ಚು ಬಾಳೆಹಣ್ಣು ಬೆಳೆಯುವ ಭಾರತಕ್ಕೂ ಈ ರೋಗ ಆಗಮಿಸಿದ್ದು, ಬಾಳೆ ಬೆಳೆಯ ಉತ್ಪಾದನೆಯನ್ನು ಕುಂಠಿತಗೊಳಿಸಿದೆ. ತೈವಾನ್ನಲ್ಲಿ ಇದನ್ನು ಮೊದಲಿಗೆ ಗುರುತಿಸಲಾಯಿತು. ನಂತರ ಇದು ಏಷ್ಯಾದಿಂದ ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ದೇಶಗಳಿಗೆ ಹರಡಿತು. ಆನಂತರ ಲ್ಯಾಟಿನ್ ಅಮೆರಿಕದ ರಾಷ್ಟ್ರಗಳಲ್ಲೂ ಕಾಣಿಸಿಕೊಂಡಿದೆ. ಇದರ ಲಕ್ಷಣಗಳೇನೆಂದರೆ ಮೊದಲಿಗೆ ಬಾಳೆಯ ಎಲೆಗಳ ಮೇಲೆ ದಾಳಿ ಮಾಡಿ ಅವುಗಳು ಹಳದಿ ಬಣ್ಣಕ್ಕೆ ತಿರುಗಿದ ನಂತರ ಒಣಗಿ ಉದುರಿ ಹೋಗುತ್ತವೆ ಬಳಿಕ ಇತರ ಭಾಗಗಳಿಗೆ ಹರಡಿ ಪೂರ್ತಿ ಬಾಳೆ ಗಿಡವೇ ನಾಶವಾಗುತ್ತದೆ. ಈ ರೋಗ ನಿಯಂತ್ರಣಕ್ಕೆ ಈವರೆಗೂ ಯಾವುದೇ ಕೀಟನಾಶಕ ಕಂಡು ಹಿಡಿಯಲಾಗಿಲ್ಲ.