ಬೀದರ ಜಿಲ್ಲೆಯಲ್ಲಿ ಕೌಠಾ ತೀರದ ಮಾಂಜ್ರಾ ನದಿಯಲ್ಲಿ ಇನ್ನೊಂದು ಅನಾಥ ಶವ ಪತ್ತೆ. ಔರಾದ್ ತಾಲೂಕಿನ ಸಂತಪೂರ ಪೊಲೀಸ್ ಠಾಣೆಯ ವಾಪ್ತಿಯಲ್ಲಿ ಬರುವ ಕೌಠಾ ಶಿವಾರಿನಲ್ಲಿ ಅನಾಥ ಶವ ಪತ್ತೆಯಾಗಿದೆ. ೫೭ ವರ್ಷದ ಕಚ್ಚೆ ಹಾಕಿದ ಮಹಿಳೆಯ ಶವ ಕೌಠಾ ಗ್ರಾಮದ ಸಮಿಪದಲ್ಲಿನ ಮಾಂಜ್ರ ನದಿಯಲ್ಲಿ ಇಂದು ಶವ ಪತ್ತೆಯಾಗಿದು, ನದಿಯಲ್ಲಿ ಶವವನ್ನು ಕಂಡ ಆಸು ಪಾಸಿನ ರೈತರು ಸಂತಪೂರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಸಂತಪೂರ ಠಾಣೆಯಲ್ಲಿ ಪ್ರಕರಣನ ದಖಲಿಸಿಕೊಂಡ ಪೊಲೀಸರು ೩ ದಿನದವರೆಗೆ ಶವದ ವಾರಸುದಾರರಿಗಾಗಿ ಕಾಯಲಿದ್ದಾರೆ. ನಂತರದ ದಿನಗಳಲ್ಲಿ ಶವ ಪರೀಕ್ಷ್ಷೆ ಮಾಡಿ ಮುಂದಿನ ಕ್ರಮ ಜರುಗಿಸುವರು. ಮಹಿಳೆ ಗೋದಿ ಬಣ್ಣದವಳಾಗಿದ್ದು ೫ ಫೀ.೬ ಸೆಮಿ ಉದ್ದ ವಾಗಿದ್ದಾಳೆ. ಸ್ಥಳಕ್ಕೆ ಔರಾದ್ ಸಿಪಿಐ ಟಿ.ಆರ್. ರಾಘವೇಂದ್ರ, ಪಿಎಸ್ಐ ಸೂವರ್ಣ, ಮುಖ್ಯ ಪೆದ್ದೆ ಸೂನೀಲ್ ಕೋರೆ ಭೇಟಿ ನೀಡಿ ಪಂಚನಾಮೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬೀದರ ಜಿಲ್ಲೆಯಲ್ಲಿ ಅನಾಥ ಶವ ಪತ್ತೆ.
Please follow and like us: