ಬೀದರ ಜಿಲ್ಲೆಯಲ್ಲಿ ಅನಾಥ ಶವ ಪತ್ತೆ.

ಬೀದರ ಜಿಲ್ಲೆಯಲ್ಲಿ ಕೌಠಾ ತೀರದ ಮಾಂಜ್ರಾ ನದಿಯಲ್ಲಿ ಇನ್ನೊಂದು ಅನಾಥ ಶವ ಪತ್ತೆ. ಔರಾದ್ ತಾಲೂಕಿನ ಸಂತಪೂರ ಪೊಲೀಸ್ ಠಾಣೆಯ ವಾಪ್ತಿಯಲ್ಲಿ ಬರುವ ಕೌಠಾ ಶಿವಾರಿನಲ್ಲಿ ಅನಾಥ ಶವ ಪತ್ತೆಯಾಗಿದೆ. ೫೭ ವರ್ಷದ ಕಚ್ಚೆ ಹಾಕಿದ ಮಹಿಳೆಯ ಶವ ಕೌಠಾ ಗ್ರಾಮದ ಸಮಿಪದಲ್ಲಿನ ಮಾಂಜ್ರ ನದಿಯಲ್ಲಿ ಇಂದು ಶವ ಪತ್ತೆಯಾಗಿದು, ನದಿಯಲ್ಲಿ ಶವವನ್ನು ಕಂಡ ಆಸು ಪಾಸಿನ ರೈತರು ಸಂತಪೂರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಸಂತಪೂರ ಠಾಣೆಯಲ್ಲಿ ಪ್ರಕರಣನ ದಖಲಿಸಿಕೊಂಡ ಪೊಲೀಸರು ೩ ದಿನದವರೆಗೆ ಶವದ ವಾರಸುದಾರರಿಗಾಗಿ ಕಾಯಲಿದ್ದಾರೆ. ನಂತರದ ದಿನಗಳಲ್ಲಿ ಶವ ಪರೀಕ್ಷ್ಷೆ ಮಾಡಿ ಮುಂದಿನ ಕ್ರಮ ಜರುಗಿಸುವರು. ಮಹಿಳೆ ಗೋದಿ ಬಣ್ಣದವಳಾಗಿದ್ದು ೫ ಫೀ.೬ ಸೆಮಿ ಉದ್ದ ವಾಗಿದ್ದಾಳೆ. ಸ್ಥಳಕ್ಕೆ ಔರಾದ್ ಸಿಪಿಐ ಟಿ.ಆರ್. ರಾಘವೇಂದ್ರ, ಪಿಎಸ್‌ಐ ಸೂವರ್ಣ, ಮುಖ್ಯ ಪೆದ್ದೆ ಸೂನೀಲ್ ಕೋರೆ ಭೇಟಿ ನೀಡಿ ಪಂಚನಾಮೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಹೊಸಕೋಟೆ ಟೋಲ್ ಬಳಿ ಪೊಲೀಸರ ತಪಾಸಣೆ

Wed Jul 15 , 2020
ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಲ್ಯಾಂಕೋ ಟೋಲ್ ಬಳಿ ಪೊಲೀಸರು ತಪಾಸಣೆ ನಡೆಸಿದರು. ಸ್ವತಃ ರಸ್ತೆಗೆ ಇಳಿದು ವಾಹನಗಳ ತಪಾಸಣೆಗೆ ಮುಂದಾದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ ಪಿ. ರವಿ ಚೆನ್ನಣ್ಣನರವರು, ಹೊಸಕೋಟೆ ಟೋಲ್ ಬಳಿ ಸವಾರರ ತಪಾಸಣೆ ಮಾಡಿದರು. ಲಾಕ್ ಡೌನ್ ಇದ್ರು ಸುಮ್ಮನೆ ಓಡಾಡ್ತಿದ್ದೀರಲ್ಲ ಎಂದು ಕಾರುಗಳನ್ನು ತಡೆದು ಪ್ರಯಾಣಿಕರನ್ನು ಹಾಗು ವಾಹನ ಸವಾರರನ್ನು ವಿಚಾರಿಸಿದರು. ಲಾಠಿ ಹಿಡಿದು ಬೈಕ್ ಗಳನ್ನ ಅಡ್ಡಗಟ್ಟಿ ಅನವಶ್ಯಕವಾಗಿ ಸುತ್ತಾಡುತ್ತಿರುವ ಸವಾರರಿಗೆ […]

Advertisement

Wordpress Social Share Plugin powered by Ultimatelysocial