ಭಾರತಕ್ಕೆ ನವೀನ್ ಮೃತದೇಹ ತರಲು ಪ್ರಧಾನಿ ಮೋದಿ ಸೂಚನೆ

 

ನವದೆಹಲಿ,ಮಾ.14- ಉಕ್ರೇನ್‍ನಲ್ಲಿ ಕಳೆದ ಮಾರ್ಚ್ 1ರಂದು ರಷ್ಯಾ ದಾಳಿಗೆ ಬಲಿಯಾದ ಹಾವರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ವೈದ್ಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತದೇಹವನ್ನು ಭಾರತಕ್ಕೆ ತರಿಸಲು ಅಗತ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ.ನಿನ್ನೆ ನಡೆದ ಸಂಪುಟ ಸಭೆಯಲ್ಲಿ ತಮ್ಮ ಅಧಿಕಾರಿಗಳಿಗೆ ಈ ಸಂಬಂಧ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ನವೀನ್ ಮೃತದೇಹ ತಾಯ್ನಾಡಿಗೆ ಬರುವ ನಿರೀಕ್ಷೆ ಇದೆ.

ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುತ್ತಿದ್ದ ಪರಿಣಾಮ ವಿದ್ಯಾರ್ಥಿಗಳೆಲ್ಲರು ಬಂಕರ್ ಸೇರಿದ್ದರು. ಅಂತೆಯೇ ನವೀನ್ ಕೂಡ ಬಂಕರ್ ನಲ್ಲಿಯೇ ರಕ್ಷಣೆ ಪಡೆದಿದ್ದರು. ಆದರೆ ಆಹಾರ ಮತ್ತು ಹಣ ತರಲೆಂದು ಹೊರಬಂದಾಗ ರಷ್ಯಾ ದಾಳಿಗೆ ನವೀನ್ ಬಲಿಯಾಗಿದ್ದರು.

ಇತ್ತ ನವೀನ್ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಹುಟ್ಟೂರಿನಲ್ಲಿ ನೀರವ ಮೌನ ಆವರಿಸಿತ್ತು. ಪೋಷಕರು ಹಾಗೂ ಕುಟುಂಬಸ್ಥರು ಮೃತದೇಹ ತಂದುಕೊಡುಂತೆ ಗೋಗರೆಯುತ್ತಿದ್ದರು. ನಿನ್ನೆಯಷ್ಟೇ ಮುಖ್ಯಮಂತ್ರಿ ಬೊಮ್ಮಾಯಿ ಕೂಡ ಈ ಬಗ್ಗೆ ಮಾತನಾಡಿ ಮೃತದೇಹ ತರುವುದಾಗಿ ಭರವಸೆ ನೀಡಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಥರ್ಕ್ಕುಂ ತೂನಿಂಧವನ್ ದಿನ 4 ಬಾಕ್ಸ್ ಆಫೀಸ್ ಕಲೆಕ್ಷನ್: ಸೂರ್ಯ ಚಿತ್ರ ಹಣ ಗಳಿಸುವ ಹುನ್ನಾರದಲ್ಲಿದೆ!

Mon Mar 14 , 2022
ಸೂರ್ಯ ಅವರ ಎತರ್ಕ್ಕುಂ ತೂನಿಂಧವನ್ ಹೃದಯಗಳನ್ನು ಗೆಲ್ಲುತ್ತಿದೆ. ಚಲನಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರಿತ ಪ್ರತಿಕ್ರಿಯೆಗಳಿಂದ ಹೆಚ್ಚು ಧನಾತ್ಮಕ ಪ್ರತಿಕ್ರಿಯೆಗಳನ್ನು ಪಡೆಯಿತು. ನಟರ ಅಭಿನಯಕ್ಕಾಗಿ, ವಿಶೇಷವಾಗಿ ಸೂರ್ಯ ಅವರ ಅಭಿನಯಕ್ಕಾಗಿ ಆಕ್ಷನ್ ಹೆಚ್ಚು ಪ್ರಶಂಸಿಸಲ್ಪಟ್ಟಿದ್ದರೂ, ‘ಆಳವಿಲ್ಲದ’ ಕಥೆಯು ಅನೇಕರನ್ನು ಮೆಚ್ಚಿಸಲಿಲ್ಲ. ಮಾರ್ಚ್ 10 ರಂದು ಬಿಡುಗಡೆಯಾದ ಈ ಚಿತ್ರವನ್ನು ಪಾಂಡಿರಾಜ್ ಬರೆದು ನಿರ್ದೇಶಿಸಿದ್ದಾರೆ. ತಮಿಳು ಪ್ರೇಕ್ಷಕರ ಅಪಾರ ಗಮನ ಸೆಳೆಯುವ ಮೂಲಕ ಚಿತ್ರವು ಭರದಿಂದ ಸಾಗುತ್ತಿದೆ. ಅಲ್ಲದೆ, ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ […]

Advertisement

Wordpress Social Share Plugin powered by Ultimatelysocial