ಮಂಗಳೂರಿನಲ್ಲಿ ಯುವಕರ ತಂಡದಿಂದ ಕೊಲೆ ಯತ್ನ

ಮಂಗಳೂರಿನಲ್ಲಿ ಯುವಕರ ತಂಡಕ್ಕೆ ಬೆದರಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ವಾಮಂಜೂರಿನ ಮೂಡುಶೆಡ್ಡೆಯಲ್ಲಿ  ಯುವಕರ ತಂಡವೊಂದಕ್ಕೆ ರೌಡಿಶೀಟರ್‌ಗಳ ತಂಡವೊಂದು ಚಾಕು ತೋರಿಸಿ ಬೆದರಿಕೆಯೊಡ್ಡಿರುವ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಎರಡು ಪ್ರಕರಣಕ್ಕೆ ಸಂಬಂಧಿದಂತೆ ಇಮ್ರಾನ್, ರಿಝ್ವಾನ್, ರಮೀಝ್, ಮುಸ್ತಾಫ್, ಶಾರೂಕ್, ಅಷ್ಪಕ್, ಮನೋಜ್ ಮೂಡುಶೆಡ್ಡೆ, ವೀರ್ಷ್ ಮೂಡುಶೆಡ್ಡೆ ಎಂಬವರನ್ನು ಬಂಧಿಸಲಾಗಿದೆ. ಕಾಂಗ್ರೆಸ್ ಮುಖಂಡ ಮಿಥುನ್ ರೈ ಪೋಸ್ಟರ್ ಹಾಕಿದ್ದಕ್ಕೆ ಅಷ್ಪಕ್ ಎಂಬಾತನಿಗೆ ಭಜರಂಗದಳ ಕಾರ್ಯಕರ್ತ ವಿವೇಕಾನಂದ ಹೆದರಿದ್ದು, ಇದರಿಂದ ಗುಂಪುಕಟ್ಟಿಕೊಂಡು ಬಂದು ವಿವೇಕಾನಂದ ಮೇಲೆ ದಾಳಿಗೆ ಯತ್ನ ನಡೆದಿದೆ.. ಇನ್ನು ವಿವೇಕಾನಂದ ಅಲ್ಲೇ ಪಕ್ಕದಲ್ಲಿರುವ ಅಂಗಡಿಯೊಳಗೆ ನುಗ್ಗಿ ಏಳು ಜನರ ತಂಡದಿಂದ ಬಚಾವಾಗಿದ್ದಾನೆ ಎನ್ನಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

 ಸಿಎಂ  ಬೊಮ್ಮಾಯಿ  ದಿಢೀರ್‌ “ದಿಲ್ಲಿ”ರಹಸ್ಯ; ಕಮಲಪಾಳಯದಲ್ಲಿ ಐಟಿ ದಾಳಿ ಸಿಎಂ ಬೊಮ್ಮಾಯಿಗೆ ಹೈಕಮಾಂಡ್‌ ಬುಲಾವ್..?

Fri Oct 8 , 2021
  ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ನವರ ಆಪ್ತನ ಮನೆ  ಮೇಲೆ ಆದಾಯ ತೆರಿಗೆ ಅಧಿಕಾರಿಗಳು  ದಾಳಿ ಮಾಡಿದ ಬೆನ್ನಲ್ಲೇ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಇಂದು ದಿಢೀರ್‌ ದೆಹಲಿ ಪ್ರವಾಸ ಮಾಡಿದ್ದಾರೆ. ಅಷ್ಟಕ್ಕೂ ಸಿಎಂ ಬೊಮ್ಮಾಯಿ ದೆಹಲಿಗೆ ತರಾತುರಿಲ್ಲಿ  ಯಾಕೆ ಹೋದ್ರು.? ಬಿಎಸ್‌ ವೈ ಆಪ್ತನ ಮನೆ  ಮೇಲೆ ಐಟಿ ರೇಡ್‌ ಆಗಿದ್ದಕ್ಕೆ ಸಿಎಂ ದೆಹಲಿಗೆ ಹೊದ್ರಾ..? ಅಥವಾ ಸಚಿವ ಸಂಪುಟ ವಿಸ್ತರಣೆಗೆ ಸಿಎಂ ದೆಹಲಿಗೆ ತೆರಳಿದರಾ.? ಈ […]

Advertisement

Wordpress Social Share Plugin powered by Ultimatelysocial