ಮಂಡ್ಯ ಶುಗರ್ ಕಾರ್ಖಾನೆ ಮಾರಾಟ ಬೇಡ: ಡಿಕೆಶಿ ಎಚ್ಚರಿಕೆ

ಮಂಡ್ಯದ ಮೈಶುಗರ್ ಕಾರ್ಖಾನೆ ಮಾರಾಟ ಮಾಡಲು ರಾಜ್ಯ ಸರ್ಕಾರ ಮುಂದಾದರೆ ಹೋರಾಟ ನಡೆಸಲು ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಟ್ವೀಟ್‌ ಮಾಡುವ ಮೂಲಕ ಸರ್ಕಾರದ ನಡೆಯನ್ನು ಖಂಡಿಸಿದ ಅವರು, ಜನರಿಗೂ ಮೈಶುಗರ್ ಕಾರ್ಖಾನೆಗೂ ಇರುವ ಬಾಂಧವ್ಯದ ಬೆಸುಗೆ ಇಂದು ನಿನ್ನೆಯದಲ್ಲ. ಹೀಗಿರುವಾಗ ನ್ಯೂನತೆ ಸರಿಪಡಿಸಿ ಸರ್ಕಾರವೇ ಕಾರ್ಖಾನೆಯನ್ನು ನಡೆಸಬೇಕು. ಅದನ್ನು ಬಿಟ್ಟು ಮಾರಾಟ ಮಾಡುವುದು ಸರಿಯಲ್ಲ. ಅದಕ್ಕೆ ಬಿಡುವುದೂ ಇಲ್ಲ. ಈ ವಿಚಾರದಲ್ಲಿ ಮಂಡ್ಯ ರೈತರ ಪರ ಹೋರಾಟಕ್ಕೆ ಸಿದ್ಧ ಎಂದಿದ್ದಾರೆ. ಸರ್ಕಾರದ ನಡೆಯನ್ನು ಜೆಡಿಎಸ್‌ ಕೂಡಾ ಖಂಡಿಸಿದೆ. ಕಾರ್ಖಾನೆಯನ್ನು ಮಾರಾಟ ಮಾಡಲು ಮುಂದಾಗುವುದು ರೈತ ವಿರೋಧಿ ನಡೆ ಎಂದಿದೆ. ಮಂಡ್ಯದಲ್ಲಿ ರೈತ ಮುಖಂಡರೂ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಚಿರು ನಿಧನಕ್ಕೆ ಸಂತಾಪ ಸೂಚಿಸಿದ ‘ಆ ದಿನಗಳು’ ಚೇತನ್

Mon Jun 8 , 2020
ನಾನು ಮತ್ತು ಚಿರಂಜೀವಿ ಸರ್ಜಾ ‘ರಣಂ’ ಸಿನಿಮಾದಲ್ಲಿ  ಒಟ್ಟಿಗೆ ನಟಿಸಿದ್ದೇವು.’ಸ್ನೇಹಿತ ಹಾಗೂ ನಟ ಚಿರು ಸರ್ಜಾ ಅವರ ಅಕಾಲಿಕ ಮರಣ ಅತೀವ ನೋವು ತಂದಿದೆ. ಸಿನಿಮಾ ಕ್ಷೇತ್ರಕ್ಕೆ ಬರುವ ಮುಂಚಿನಿಂದಲೂ ನಾವು ಒಬ್ಬರಿಗೊಬ್ಬರು ಬಲ್ಲವರಾಗಿದ್ದೆವು. ಅವರು ಯಾವಾಗಲೂ ಖುಷಿಯಿಂದ ಇರುತ್ತಿದ್ದರು ಮತ್ತು ಕಾಳಜಿ ವಹಿಸುತ್ತಿದ್ದರು. ನಾವು ರಣಂ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೆವು. ಆ ಸಿನಿಮಾ ಬಿಡುಗಡೆ ಆಗಬೇಕಿದೆ. ತುಂಬ ಬೇಗ ನಮ್ಮನೆಲ್ಲ ಬಿಟ್ಟು ಹೋದಿರಿ ಸ್ನೇಹಿತ. ಮೇಘನಾ, ಧ್ರುವ, ಅರ್ಜುನ್‌ […]

Advertisement

Wordpress Social Share Plugin powered by Ultimatelysocial