ಮಧುಗಿರಿ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಬೆಳದಿದ್ದ ನಿರುಪಯುಕ್ತ ಗಿಡ ಹಾಗೂ ಮುಳ್ಳಿನ ಗಿಡಗಳನ್ನು ತಹಶೀಲ್ದಾರ್ ಡಾ.ಜಿ.ವಿಶ್ವನಾಥ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ನಂತರ ಮಾತನಾಡಿದ ತಹಶೀಲ್ದಾರ್ ಡಾ. ಜಿ.ವಿಶ್ವನಾಥ್ ಇಲಾಖೆಯ ಆವರಣದಲ್ಲಿ ಬೆಳೆದಿರುವ ನಿರುಪಯುಕ್ತ ಗಿಡಗಳು ಹಾಗೂ ಕಾಫಿ ಲೋಟಗಳು ಸೇರಿದಂತೆ ತ್ಯಾಜ್ಯ ವಸ್ತುಗಳು ಹೆಚ್ಚಾಗಿದ್ದವು. ಇದರಿಂದ ರೋಗಗಳು ಹರಡದಂತೆ ಈ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ತಾಲ್ಲೂಕು ಕಚೇರಿಗೆ ಕೆಲಸ ಕಾರ್ಯಗಳಿಗೆ ಬರುವ ಜನರು ಸ್ವಚ್ಚತೆಯನ್ನು ಕಾಪಾಡಬೇಕೆಂದು ತಿಳಿಸಿದರು. ಹಾಗೂ ಆಹಾರ ಶಿರೆಸ್ತೆದಾರ್ ಗಣೇಶ್, ಕಂದಾಯ ನಿರೀಕ್ಷಕ ಸಿದ್ದರಾಜು, ಗ್ರಾಮಲೆಕ್ಕಿಗರಾದ ಜಿ.ಜಯರಾಮಯ್ಯ, ಶಿವರಾಮಯ್ಯ, ಹಾಗೂ ಮತ್ತಿತರ ನೌಕರರು ಕಾರ್ಯದಲ್ಲಿ ಭಾಗಿಯಾಗಿದ್ದರು.
ಮಧುಗಿರಿ ಪಟ್ಟಣದ ತಾಲ್ಲೂಕು ಕಚೇರಿ ಆವರಣ
Please follow and like us: