ಮಳೆಯಿಂದಾಗಿ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು

ರಾಜ್ಯದಲ್ಲಿ ಕೊರೊನಾ ಭೀಕಾರತೆಯಿಂದಾಗಿ ಜನರು ಆತಂಕದಲ್ಲಿ ಇದ್ದಾರೆ.ಆದರೆ ರಾಜ್ಯದ ಹಲವು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ ಬಾಗಲಕೋಟೆ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಗಾಳಿ ಸಹಿತ ಮಳೆಯಾಗಿತ್ತು, ಇದರಿಂದ ರೈತರ ಭಾರೀ ಆಸ್ತಿಪಾಸ್ತಿಗಳಿಗೆ ತೊಂದರೆಯಾಗಿದೆ. ಬದಾಮಿ ಹೊರವಲಯದ ರೈತರ ಹೊಲದಲ್ಲಿ ೮೦ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿಬಿದ್ದಿವೆ. ಬಸವರಾಜ ,ಹನುಮಂತ, ರಾಮಪ್ಪ, ಗ್ಯಾನಪ್ಪ, ಮಾಗುಂಡಪ್ಪ, ಎಂಬವರ ಮನೆಗಳ ಮೇಲ್ಚಾವಣಿಗೆ ಹೊದಿಸಲಾಗಿದ್ದ ಕಬ್ಬಿಣದ ಶೀಟ್ಗಳು ಗಾಳಿಯ ರಭಸಕ್ಕೆ ಹಾರಿ ಹೋಗಿವೆ. ಮತ್ತೊಂದೆಡೆ ಅಪಾರ ಪ್ರಮಾಣದ ಕಬ್ಬಿನ ಬೆಳೆಗೆ ಹಾನಿಯುಂಟಾಗಿದೆ. ಪಂಪ್ಸೆಟ್ ಸ್ವಿಚ್ ಬಾಕ್ಸ್ಗಳು ಗಾಳಿಗೆ ಕಿತ್ತು ಬಿದ್ದು ಹೋಗಿವೆ. ಹವವಾರು ಮರಗಳು ಧರೆಗುರುಳಿವೆ.

Please follow and like us:

Leave a Reply

Your email address will not be published. Required fields are marked *

Next Post

ಎಲೆಕ್ಷನ್ ಮೇಲೆ ಕೇಸರಿ ಕಣ್ಣು / ಡಿಜಿಟಲ್ ಕ್ಯಾಂಪೆನ್‌ಗೆ ಸಿದ್ಧತೆ

Tue Jun 2 , 2020
ಬಿಹಾರದಲ್ಲಿ ೨೪೩ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯಲಿದೆ. ೨೦೧೫ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ೫೩ಸ್ಥಾನ ಗಳಿಸಿದ್ದರೆ, ಎನ್‌ಡಿಎ ಮೈತ್ರಿಕೂಟ ೫೮ ಸ್ಥಾನ ಗಳಿಸಿತ್ತು. ಈ ಬಾರಿ ಹೆಚ್ಚು ಸ್ಥಾನ ಗಳಿಸುವ ನಿಟ್ಟಿನಲ್ಲಿ ಕೇಸರಿ ಪಾಳಯ ಹೊಸ ಯೋಜನೆ ರೂಪಿಸ್ತಿದೆ ಎನ್ನಲಾಗಿದೆ.  ಎಲ್ಲಾ ಎಲೆÀಕ್ಷನ್‌ಗಳಲ್ಲೂ ಬಿಜೆಪಿ ಬೃಹತ್ ರ‍್ಯಾಲಿಗಳನ್ನು ನಡೆಸೋ ಮೂಲಕ, ಸಾವಿರಾರು ಜನರನ್ನು ಉದ್ದೇಶಿಸಿ ಮೋದಿ, ಅಮಿತ್ ಶಾ ಮಾತನಾಡುವ ಮೂಲಕ ಮತಯಾಚನೆ ಮಾಡ್ತಿದ್ರು, ಆದ್ರೆ ಈ ಬಾರಿ […]

Advertisement

Wordpress Social Share Plugin powered by Ultimatelysocial