ರಾಜ್ಯದಲ್ಲಿ ಕೊರೊನಾ ಭೀಕಾರತೆಯಿಂದಾಗಿ ಜನರು ಆತಂಕದಲ್ಲಿ ಇದ್ದಾರೆ.ಆದರೆ ರಾಜ್ಯದ ಹಲವು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ ಬಾಗಲಕೋಟೆ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಗಾಳಿ ಸಹಿತ ಮಳೆಯಾಗಿತ್ತು, ಇದರಿಂದ ರೈತರ ಭಾರೀ ಆಸ್ತಿಪಾಸ್ತಿಗಳಿಗೆ ತೊಂದರೆಯಾಗಿದೆ. ಬದಾಮಿ ಹೊರವಲಯದ ರೈತರ ಹೊಲದಲ್ಲಿ ೮೦ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿಬಿದ್ದಿವೆ. ಬಸವರಾಜ ,ಹನುಮಂತ, ರಾಮಪ್ಪ, ಗ್ಯಾನಪ್ಪ, ಮಾಗುಂಡಪ್ಪ, ಎಂಬವರ ಮನೆಗಳ ಮೇಲ್ಚಾವಣಿಗೆ ಹೊದಿಸಲಾಗಿದ್ದ ಕಬ್ಬಿಣದ ಶೀಟ್ಗಳು ಗಾಳಿಯ ರಭಸಕ್ಕೆ ಹಾರಿ ಹೋಗಿವೆ. ಮತ್ತೊಂದೆಡೆ ಅಪಾರ ಪ್ರಮಾಣದ ಕಬ್ಬಿನ ಬೆಳೆಗೆ ಹಾನಿಯುಂಟಾಗಿದೆ. ಪಂಪ್ಸೆಟ್ ಸ್ವಿಚ್ ಬಾಕ್ಸ್ಗಳು ಗಾಳಿಗೆ ಕಿತ್ತು ಬಿದ್ದು ಹೋಗಿವೆ. ಹವವಾರು ಮರಗಳು ಧರೆಗುರುಳಿವೆ.
ಮಳೆಯಿಂದಾಗಿ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು
Please follow and like us: