ಮುಖ್ಯಾಧಿಕಾರಿಯನ್ನು ಅಧಿಕಾರದಿಂದ ತೆಗೆಯುವಂತೆ ಆಗ್ರಹ

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕೆಂಭಾವಿ ಪಟ್ಟಣದಲ್ಲಿರುವ ಪುರಸಭೆಯ ಮುಖ್ಯಾಧಿಕಾರಿ ದೇವೆಂದ್ರಪ್ಪ ಹೆಗಡೆ ವಿರುದ್ಧ ಪುರಸಭೆ ಸದಸ್ಯರು ಕೆಂಡ ಮಂಡಲವಾಗಿದ್ದಾರೆ. ಪುರಸಭೆಯ ಮುಖ್ಯಾಧಿಕಾರಿಯನ್ನು ಅಧಿಕಾರದಿಂದ ತೆಗೆಯುವಂತೆ ಪ್ರತಿಭಟನೆ ನಡೆಸಿದ್ದಾರೆ. ಇವರಿಂದ ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲವೆಂಬ ಗಂಭೀರ ಆರೋಪ ಮತ್ತು ಒಂದು ವರ್ಷವಾದರೂ ಯಾವುದೇ ಸಾಮಾನ್ಯ ಸಭೆಯಾಗಲಿ ತುರ್ತು ಸಭೆಯಾಗಲಿ ಕರೆದಿಲ್ಲ. ಕೂಡಲೇ ಇವರನ್ನು ತೆಗೆದುಹಾಕುವಂತೆ ಪುರಸಭೆಯ ಸರ್ವ ಸದಸ್ಯರ ಆಗ್ರಹ ಮಾಡಿದ್ದಾರೆ. ಒಂದು ವೇಳೆ ಇವರನ್ನು ತೆಗೆದು ಹಾಕದಿದ್ದರೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಮೂಲಕ ಮನವಿ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಅಮರನಾಥ್ ಯಾತ್ರಿಕರ ಮೇಲೆ ದಾಳಿಗೆ ಸಂಚು

Sat Jul 18 , 2020
ಪ್ರಸಿದ್ದ ಅಮರನಾಥ ಯಾತ್ರೆಯ ಮೇಲೆ ಕರಿನೆರಳು ಬಿದ್ದಿದೆ..ಹೌದು ಅಮರನಾಥ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಭಾರತ ಸೇನಾ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗಾಗಲೇ ಜೈಶ್-ಎ-ಮೊಹಮ್ಮದ್ ಕಮಾಂಡರ್ ಸೇರಿದಂತೆ ಮೂವರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿದ್ದು, “ಅಮರನಾಥ ಯಾತ್ರೆಯನ್ನು ಯಾವುದೇ ಅಡೆತಡೆಯಿಲ್ಲದೆ ಶಾಂತಿಯುತವಾಗಿ ನಡೆಸಲಾಗುವುದು ಮತ್ತು ಭದ್ರತಾ ಪರಿಸ್ಥಿತಿ ನಿಯಂತ್ರಣದಲ್ಲಿ ಮುಂದುವರಿಯುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ” ಎಂದು ಅವರು ಹೇಳಿದರು. Please follow and like […]

Advertisement

Wordpress Social Share Plugin powered by Ultimatelysocial