ಮಂಡ್ಯ ಜಿಲ್ಲೆಯ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ೪೦ ವರ್ಷಗಳ ಗುತ್ತಿಗೆ ಪಡೆದಿರುವ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಎನ್ಎಸ್ಎಲ್ ಶುಗರ್ಸ ಸಲ್ಲಿಸಿರುವ ಅರ್ಜಿ ಸಂಬ0ಧ ನಿರಾಣಿ ಶುಗರ್ಸ ಮಾಲೀಕ ಮುರುಗೇಶ್ ನಿರಾಣಿ ಹಾಗೂ ಇತರರಿಗೆ ಹೈಕೋರ್ಟ ತುರ್ತು ನೋಟಿಸ್ ಜಾರಿ ಮಾಡಿದೆ. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಬಿ ಭಜಂತ್ರಿ ನೇತೃತ್ವದ ಏಕಸದಸ್ಯ ಪೀಠ, ಮುರುಗೇಶ್ ನಿರಾಣಿ ಹಾಗೂ ಎಲ್ಲ ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿ ಮಾಡಿತು. ಟೆಂಡರ್ ಪ್ರಕ್ರಿಯೆಗೆ ಸಂಬ0ಧಿಸಿದ ಎಲ್ಲಾ ದಾಖಲೆಗಳನ್ನು ಮುಂದಿನ ವಿಚಾರಣೆ ವೇಳೆ ಹೈಕೋರ್ಟ್ಗೆ ಸಲ್ಲಿಸುವಂತೆ ಆಯುಕ್ತರಿಗೆ ನಿರ್ದೇಶಿಸಿತು.
ಮುರುಗೇಶ್ ನಿರಾಣಿಗೆ ಹೈಕೋರ್ಟ್ ನೊಟೀಸ್
Please follow and like us: