ಮುಳಬಾಗಿಲು: ತಾಲ್ಲೂಕಿನ ಆವಣಿ ಹೋಬಳಿ ವಿ. ಗುಟ್ಟಹಳ್ಳಿ ವ್ಯಾಪ್ತಿಯ ವಿರೂಪಾಕ್ಷಿ ಗ್ರಾಮಕ್ಕೆ ಸೇರಿದ ಸರ್ವೆ ನಂ. 28ರಲ್ಲಿ 4 ಎಕರೆ ಮತ್ತು ಸರ್ವೆ ನಂ. 31ರ 37 ಗುಂಟೆ ಜಮೀನು ಒತ್ತುವರಿಯಾಗಿದ್ದು, ತೆರವುಗೊಳಿಸಲು ಸರ್ವೆ ನಡೆಸಲಾಯಿತು.ಈ ಜಮೀನು ಅಮರಾಯಿ ಗುಂಡು ತೋಪು ಪ್ರದೇಶವಾಗಿದೆ. ಇದನ್ನು ಖಾಸಗಿ ವ್ಯಕ್ತಿಗಳು ಉಳುಮೆ ಮಾಡುವುದು ನಿಷೇಧವಾಗಿದೆ. ಈ ಜಮೀನನ್ನು ಹಲವಾರು ವರ್ಷಗಳಿಂದ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ವಶಪಡಿಸಿಕೊಂಡಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ತಹಶೀಲ್ದಾರ್ ಶೋಭಿತಾ ಅವರ ಸೂಚನೆ ಹಿನ್ನೆಲೆಯಲ್ಲಿ ಶನಿವಾರ ಸರ್ವೆ ನಡೆಸಿ ಜಮೀನಿನ ವಿಸ್ತೀರ್ಣವನ್ನು ಗುರುತಿಸಲಾಯಿತು.ರಾಜಸ್ವ ನಿರೀಕ್ಷಕ ಸಿ. ಸುಬ್ರಮಣಿ. ಗಿರೀಶ್, ರಾಮಕೃಷ್ಣ, ಚಂದ್ರಪ್ಪ ಮತ್ತು ಸರ್ವೆ ಅಧಿಕಾರಿಗಳು ಹಾಜರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada