ಮುಳಬಾಗಿಲು: ಅಮರಾಯಿ ಗುಂಡು ತೋಪು ಒತ್ತುವರಿ

ಮುಳಬಾಗಿಲು: ತಾಲ್ಲೂಕಿನ ಆವಣಿ ಹೋಬಳಿ ವಿ. ಗುಟ್ಟಹಳ್ಳಿ ವ್ಯಾಪ್ತಿಯ ವಿರೂಪಾಕ್ಷಿ ಗ್ರಾಮಕ್ಕೆ ಸೇರಿದ ಸರ್ವೆ ನಂ. 28ರಲ್ಲಿ 4 ಎಕರೆ ಮತ್ತು ಸರ್ವೆ ನಂ. 31ರ 37 ಗುಂಟೆ ಜಮೀನು ಒತ್ತುವರಿಯಾಗಿದ್ದು, ತೆರವುಗೊಳಿಸಲು ಸರ್ವೆ ನಡೆಸಲಾಯಿತು.ಈ ಜಮೀನು ಅಮರಾಯಿ ಗುಂಡು ತೋಪು ಪ್ರದೇಶವಾಗಿದೆ. ಇದನ್ನು ಖಾಸಗಿ ವ್ಯಕ್ತಿಗಳು ಉಳುಮೆ ಮಾಡುವುದು ನಿಷೇಧವಾಗಿದೆ. ಈ ಜಮೀನನ್ನು ಹಲವಾರು ವರ್ಷಗಳಿಂದ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ವಶಪಡಿಸಿಕೊಂಡಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ತಹಶೀಲ್ದಾರ್ ಶೋಭಿತಾ ಅವರ ಸೂಚನೆ ಹಿನ್ನೆಲೆಯಲ್ಲಿ ಶನಿವಾರ ಸರ್ವೆ ನಡೆಸಿ ಜಮೀನಿನ ವಿಸ್ತೀರ್ಣವನ್ನು ಗುರುತಿಸಲಾಯಿತು.ರಾಜಸ್ವ ನಿರೀಕ್ಷಕ ಸಿ. ಸುಬ್ರಮಣಿ. ಗಿರೀಶ್, ರಾಮಕೃಷ್ಣ, ಚಂದ್ರಪ್ಪ ಮತ್ತು ಸರ್ವೆ ಅಧಿಕಾರಿಗಳು ಹಾಜರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿ: ಪ್ರತಿಭಾಗೆ 'ಸ್ಮಾರ್ಟ್‌ ಅಂಬಾಸಿಡರ್‌' ಪ್ರಶಸ್ತಿ

Sun Jan 30 , 2022
ಹುಬ್ಬಳ್ಳಿ: ಸಿಂಗಪುರದಲ್ಲಿ ನೆಲೆಸಿರುವ ಹುಬ್ಬಳ್ಳಿಯ ಪ್ರತಿಭಾ ಕರ್ನೂಲ್ ಅವರಿಗೆ ಅಲ್ಲಿನ ಸರ್ಕಾರ ನೀಡುವ ‘ಸ್ಮಾರ್ಟ್‌ ಅಂಬಾಸಿಡರ್‌’ ಪ್ರಶಸ್ತಿ ಲಭಿಸಿದೆ. ಇವರು ನಗರದ ವೈದ್ಯ ಕೆ. ರಮೇಶ ಬಾಬು ಅವರ ಪುತ್ರಿ.ಪ್ರತಿಭಾ ಅವರು ಸಿಂಗಪುರದಲ್ಲಿ ಕಾಗ್ನಿಜೆಂಟ್‌ ಎಂಬ ಸಂಸ್ಥೆಯ ಸಾಮಾಜಿಕ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ.ವಲಸೆ ಕಾರ್ಮಿಕರ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಿ ಕೆಲಸ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and […]

Advertisement

Wordpress Social Share Plugin powered by Ultimatelysocial