ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ತಿಕ್ಕಲಾಟದ ನಡುವೆ ಹೊಸ ಬೆಳವಣಿಗೆಯಂದು ನಡೆದಿದ್ದು , ಕಾಂಗ್ರೆಸ್ ನಾಯಕರುಗಳ ಮನೆ ಮೇಲೆ ಐಟಿ ದಾಳಿ ನಡೆದಿದೆ. ಈ ಕರಿತಂತೆ ಮುಖ್ಯಮಂತ್ರ ಅಶೋಕ್ ಗೆಹ್ಲೆಟ್ ಅವರು ಸಭೆ ನಡೆಸುತ್ತಿದ್ದಾರೆ. ಗೆಹ್ಲೆಟ್ ಅವರ ಸಹದ್ಯೋಗಿಗಳ ವಲಯವು ಸಹ ಐಟಿ ದಾಳಿ ಗುರಿಯಾಗಿದೆ. ಕಾಂಗ್ರೆಸ್ ನ ಹಿರಿಯ ನಾಯಕರಾದ ರಾಜೀವ್ ಅರೋರಾ, ಧರ್ಮೇಂದ್ರ ಚೌಧರಿ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಇಲ್ಲದ ನಗದು, ಚಿನ್ನಾಭರಣ, ಆಸ್ತಿಗಳ ದಾಖಲೆಪತ್ರ, ಲಾಕರ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಐಟಿ ಅಧಿಕಾರಿಗಳ ತಂಡ ಬಿಲ್ವಾರಾ ಹಾಗ್ ಝಲಾವಾಡ್ ಗೂ ಭೇಟಿ ನೀಡಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ರಾಜಸ್ಥಾನದಲ್ಲಿ ರಾಜಕೀಯ ಅತಂತ್ರ
Please follow and like us: