ರಾಜ್ಯದಲ್ಲಿ ಇಂದು ಮತ್ತೆ ಬರೋಬರಿ 45 ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕು ಪೀಡಿತರ ಸಂಖ್ಯೆ 750 ಕ್ಕೆ ಏರಿಕೆಯಾಗಿದೆ. ಈ ಕುರಿತು ರಾಜ್ಯ ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ. ಒಂದೇ ದಿನ ಇಷ್ಟು ಏಕಾಏಕಿ ಸೋಂಕಿತರ ಸಂಖ್ಯೆ ಕಂಡುಬಂದಿರುವುದು ಇದೇ ಮೊದಲು. ಇನ್ನು ಹೊಸದಾಗಿ ಸೋಂಕಿತರ ಪೈಕಿ ಭಟ್ಕಳದಲ್ಲಿ-12, ಬೆಳಗಾವಿ ಜಿಲ್ಲೆಯಲ್ಲಿ 11, ದಾವಣಗೆರೆ ಜಿಲ್ಲೆಯಲ್ಲಿ 14 ಬೆಂಗಳೂರಿನಲ್ಲಿ 7, ಬಳ್ಳಾರಿಯ ಒಬ್ಬರಲ್ಲಿ ಸೋಂಕು ದೃಢಪಟ್ಟಿರುವುದು ತಿಳಿದು ಬಂದಿದೆ. ಕೊರೋನಾಗೆ ಇದುವರೆಗೆ 30 ಜನರು ರಾಜ್ಯದಲ್ಲಿ ಸಾವನ್ನಪ್ಪಿದ್ದರೇ, ಸೋಂಕಿತರಾದಂತ 366 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ವರದಿ:ವೆಬ್ ಡೆಸ್ಕ್ ಸ್ಪೀಡ್ ನ್ಯೂಸ್ ಕನ್ನಡ