ರಾಜ್ಯಾದಾಂತ ಮತ್ತೆ ಕಾಣಿಸಿಕೊಂಡ ಮಿಡತೆ ಸಂಕಷ್ಟಕ್ಕೀಡಾದ ರೈತರು

ಕೆಲವು ದಿನಗಳ ಹಿಂದಷ್ಟೆ ರಾಜ್ಯಾದಂತ ರೈತರಿಗೆ ತೀವ್ರ ಭೀತಿ ಹುಟ್ಟಿಸಿದ್ದ ಮಿಡತೆಗಳು ಇದೀಗ ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಿಗೆ ಲಗ್ಗೆಯಿಟ್ಟು ಮತ್ತೊಮ್ಮೆ ಆತಂಕ ಮೂಡಿಸಿವೆ. ಕಳೆದೆರಡು ಮೂರು ದಿನಗಳಿಂದ ಬೀಸುತ್ತಿರುವ ಗಾಳಿಯಿಂದ ಮಿಡತೆಗಳು ಮರಳಿ ದಾಳಿ ಮಾಡುತ್ತಿವೆ ಎಂದು ಮಿಡತೆ ಎಚ್ಚರಿಕೆ ಸಂಸ್ಥೆ ಮಾಹಿತಿ ನೀಡಿದೆ. ಅದಲ್ಲದೇ ಉತ್ತರ ಪ್ರದೇಶದ ಪ್ರಯಾಗ್ ರಾಜ್, ಮಹಾರಾಷ್ಟ್ರದ ನಾಗ್ಪುರ ಹಾಗೂ ರಾಜಸ್ಥಾನದ ಹಲವೆಡೆ ಮಿಡತೆಗಳು ಮತ್ತೊಮ್ಮೆ ದಾಳಿ ಮಾಡುವ ಮೂಲಕ ರೈತರಿಗೆ ಹೊಸ ಸಂಕಷ್ಟಕ್ಕೀಡು ಮಾಡಿವೆ. ಇನ್ನು ಜುಲೈ ಮಧ್ಯದ ವೇಳೆಯಲ್ಲಿ ಮತ್ತೊಮ್ಮೆ ಮಿಡತೆಗಳು ದಾಳಿಯಿಡುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಆಯಾ ಸರ್ಕಾರಗಳಿಗೆ ಎಚ್ಚರಿಕೆ ನೀಡಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಇದೇ ವರ್ಷ ಐಪಿಎಲ್

Thu Jun 11 , 2020
ದೇಶಾದ್ಯಾಂತ ಕೊರೋನಾ ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಒಂದೊಂದೆ ಉದ್ಯಮಗಳು ಕಾರ್ಯ ವಹಿಸುತ್ತಿವೆ ಹಾಗೂ ಜನಜೀವನ ಕೂಡ ಮಾಮೂಲಿ ಸ್ಥಿಥಿಯಲ್ಲಿ ನಡೆಯುತ್ತಿದೆ, ಅಕ್ಟೋಬರ್ ನಲ್ಲಿ ಐಸಿಸಿ ಟಿ20 ವಿಶ್ವಕಪ್ ನಡೆಯಬೇಕಿತ್ತು, ಆದರೆ ಐಸಿಸಿ ಇಲ್ಲಿಯವರೆಗೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಅಲ್ಲದೆ ಪ್ರತಿ ಬಾರಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಲ್ಲೂ ಚರ್ಚೆಗಳಾಗುತ್ತಿವೆ ಹೊರತು ಐಸಿಸಿ ಅಧಿಕಾರಿಗಳು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಹೀಗಿರುವಾಗ ಐಪಿಎಲ್ 13ನೇ ಆವೃತ್ತಿಯನ್ನು ಖಾಲಿ ಮೈದಾನದಲ್ಲಿ […]

Advertisement

Wordpress Social Share Plugin powered by Ultimatelysocial