ರಾಜ್ ಕುಮಾರ್ ಬರ್ತ್ ಡೇ

ಕನ್ನಡ ಸಿನಿಮಾಗಳ ಮೇರು ನಟ,ಕನ್ನಡ ಅಭಿಮಾನಿಗಳ ಆರಾಧ್ಯ ದೈವ,ನಟ ಸೌರ್ವಭೌಮ ದಿವಂಗತ ನಟ  ಡಾ.ರಾಜ್ ಕುಮಾರ್ ಅವರ 92ನೇ ಹುಟ್ಟು ಹಬ್ಬ ಇಂದು.. ಪ್ರತೀ ವರ್ಷ ಕಂಠೀರವ ಸ್ಟುಡಿಯೋದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸುತ್ತಿದ್ದರು.ಆದರೆ ಕರೋನ ಲಾಕ್ ಡೌನ್ ಹಿನ್ನೆಲೆ ಕಡಿಮೆ ಪ್ರಮಾಣದಲ್ಲಿ ಅಭಿಮಾನಿಗಳು ಈ ಬಾರಿ ಸೇರಿದ್ರು..ಕುಟುಂಬಸ್ಥರೆಲ್ಲರೂ ಸೇರಿ ಜನ್ಮ ದಿನವನ್ನು ಆಚರಿಸುತ್ತಿದ್ರು..ಈ ಬಾರಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿನ ತಂದೆ ರಾಜ್ ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿದ್ರು..ಕೊರೊನಾ ಹರಡುತ್ತಿರೋ ಹಿನ್ನಲೆ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್  ಮಾಸ್ಕ್ ಮತ್ತು ಗ್ಲೌಸ್ ಧರಿಸಿಯೇ ಪೂಜೆ ಸಲ್ಲಿಸಿದ್ರು. ಸಾಮಾಜಿಕ ಅಂತರ ಕಾಯ್ದುಕೊಂಡ ನಟ ಶಿವಣ್ಣ ಎಲ್ಲರಿಗೂ ಸ್ವೀಟ್ ಹಂಚಿದ್ರು..ತಂದೆ-ತಾಯಿ ಇಬ್ಬರ ಸ್ಮಾರಕಕ್ಕೂ ಪೂಜೆ ಸಲ್ಲಿಸಿದ ಶಿವರಾಜ್ ಕುಮಾರ್ ಬಳಿಕ ಮಾತನಾಡಿದ್ರು. ಕರೋನಾ ಟೈಮ್ ಅಲ್ಲಿ  ಅಪ್ಪಾಜಿ ಜನ್ಮ ದಿನ ಬಂದಿದೆ. ಏನೂ ಮಾಡೋದಕ್ಕೆ ಆಗೋದಿಲ್ಲ.ಎಲ್ಲವನ್ನೂ ಎದುರಿಸಬೇಕು. ಲಾಕ್ ಡೌನ್ ನಿಯಮಗಳನ್ನೂ ಪಾಲಿಸಲೇಬೇಕು. ಆರೋಗ್ಯದ ದೃಷ್ಟಿಯಿಂದ ಅದು ಅವಶ್ಯಕವಾಗಿದೆ..ಏಪ್ರಿಲ್ ಅಲ್ಲಿ ಜನ್ಮ ದಿನ ಆಚರಿಸಲಿಕ್ಕೆ ಆಗದೇ ಇದ್ದರೇ, ಮೇ ಇದೆ. ಜೂನ್ ಇದೆ.ಆವಾಗ ಅಭಿಮಾನಿಗಳು ಸೆಲೆಬ್ರೇಟ್ ಮಾಡಿದ್ರಾಯ್ತು ತಪ್ಪೇನು ಇಲ್ಲ ಎಂದು ಹೇಳಿದ್ರು. ಅಭಿಮಾನಿಗಳು ಸೋಷಿಯಲ್ ಡಿಸ್ಟನ್ಸ್ ಕಾಯ್ದು ಕೊಳ್ಳಿ,ಆರಾಮ್ ಆಗಿ ಮನೆಯಲ್ಲಿರಿ ,ಕರೋನಾ ಬಂದಿದೆ ಭಯಪಡ್ಬೇಡಿ,ಬಂದಿದೆ ಹೋಗುತ್ತದೆ.. ಲಾಕ್ ಡೌನ್ ಟೈಮ್ ಅಲ್ಲಿ  ಮನೆಯಲ್ಲಿಯೇ ಇದ್ದೇನೆ, ಆಕ್ಟೀವ್ ಆಗಿದ್ದೇನೆ. ಸಿನಿಮಾ ನೋಡುತ್ತೇನೆ,ಎರಡೂ ಹೊತ್ತು ಸಿನಿಮಾ ,ವರ್ಕೌಟ್ ಮಾಡುತ್ತೇನೆ  ಎಂದು ಶಿವರಾಜ್ ಕುಮಾರ್ ಹೇಳಿದ್ರು.. ಇನ್ನು ರಾಜ್ ಜನ್ಮ ದಿನದಂದು ಯುವರಾಜ್ ಕುಮಾರ್ ಫಸ್ಟ್ ಫಿಲ್ಮಂ ಪೋಸ್ಟರ್ ರಿಲೀಸ್ ಮಾಡಲಾಗುತ್ತಿದೆ.. ಕನ್ನಡಕ್ಕೆ ಮತ್ತೊಬ್ಬ ಭರವಸೆಯ ನಟನ ಪ್ರವೇಶ ಆಗುತ್ತಿದೆ. ಯುವರಾಜ್ ಕುಮಾರ್ ಕೂಡ ನನ್ನ ಮಗನೇ ಆತನ ಬೆಳವಣಿಗೆ ನೋಡಿಕೊಂಡು ಬರ್ತಿದ್ದೇನೆ. ಪೂರ್ಣಿಮಾ ಪುತ್ರ ಧೀರೆನ ಕೂಡ ಬರ್ತಿದ್ದಾನೆ. ಅವನೂ ಕೂಡ ಪ್ರಾಮಿಸಿಂಗ್ ಆಕ್ಟರ್ ಅಂತ ಹೇಳಿದ್ರು.

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಕೊರೊನಾ ರೋಗಿಗಳಿಗೆ ಪ್ಲಾಸ್ಮಾ ಥೆರಪಿ

Fri Apr 24 , 2020
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ರೋಗಿಗಳಿಗೆ ಪ್ಲಾಸ್ಮಾ ಥೆರಪಿಗೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದ್ದು, ನಾಳೆ ಮೊದಲ ರೋಗಿಗೆ ಪ್ಲಾಸ್ಮಾ ಥೆರಪಿ ನಡೆಸಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೆ.ಸುಧಾಕರ್, ಕೇಂದ್ರ ರ‍್ಕಾರದಿಂದ ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿಗೆ ಅನುಮತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಾಳೆ ಮೊದಲ ರೋಗಿಗೆ ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಪ್ಲಾಸ್ಮಾ ಥೆರಪಿ ನಡೆಯಲಿದೆ ಎಂದು […]

Advertisement

Wordpress Social Share Plugin powered by Ultimatelysocial