ಆಗಸ್ಟ್ ೫ ರಂದು ನಡೆಯಲಿರುವ ರಾಮ ಜನ್ಮ ಭೂಮಿಯ ಪೂಜೆಯ ಕಾರ್ಯಕ್ಕೆ ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮಿಜಿಯವರಿಗೆ ಆಹ್ವಾನವನ್ನ ನೀಡಲಾಗಿದೆ ಇದಕ್ಕೆ ಸ್ವಾಮಿಜಿಗಳು ಸಹ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಮುಂಬರುವ ಆಗಸ್ಟ್ ೫ರಂದು ನಡೆಯಲಿರುವ ರಾಮಮಂದಿರದ ಭೂಮಿಪೂಜೆಗೆ ಆಗಮಿಸುವಂತೆ ವಿಶ್ವ ಹಿಂದೂ ಪರಿಷತ್ನ ವಿವಿಧ ಮುಖಂಡರು ಹಾಗೂ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪದಾಧಿಕಾರಿಗಳು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳು ಅಯೋಧ್ಯೆ ರಾಮಮಂದಿರದ ಭೂಮಿಪೂಜೆಗೆ ಆಗಮಿಸಬೇಕೆಂದು ಆಹ್ವಾನಿಸಿದ್ದು, ಭಾಗವಹಿಸಲು ಶ್ರೀಗಳು ಸಮ್ಮತಿ ಸೂಚಿಸಿದ್ದಾರೆ. ಇದೇ ವೇಳೆ ಅವರ ಅಮೃತ ಹಸ್ತದಿಂದ ಪುಣ್ಯಕ್ಷೇತ್ರಕ್ಕೆ ಮೃತ್ತಿಕೆ ಸ್ವೀಕರಿಸಲಾಯಿತು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರು ತಿಳಿಸಿದರು.
ರಾಮಮಂದಿರ ಭೂಮಿ ಪೂಜೆ
Please follow and like us: