ರಾಮಮಂದಿರ ಭೂಮಿ ಪೂಜೆ

ಆಗಸ್ಟ್ ೫ ರಂದು ನಡೆಯಲಿರುವ ರಾಮ ಜನ್ಮ ಭೂಮಿಯ ಪೂಜೆಯ ಕಾರ್ಯಕ್ಕೆ ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮಿಜಿಯವರಿಗೆ ಆಹ್ವಾನವನ್ನ ನೀಡಲಾಗಿದೆ ಇದಕ್ಕೆ ಸ್ವಾಮಿಜಿಗಳು ಸಹ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಮುಂಬರುವ ಆಗಸ್ಟ್ ೫ರಂದು ನಡೆಯಲಿರುವ ರಾಮಮಂದಿರದ ಭೂಮಿಪೂಜೆಗೆ ಆಗಮಿಸುವಂತೆ ವಿಶ್ವ ಹಿಂದೂ ಪರಿಷತ್‍ನ ವಿವಿಧ ಮುಖಂಡರು ಹಾಗೂ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪದಾಧಿಕಾರಿಗಳು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳು ಅಯೋಧ್ಯೆ ರಾಮಮಂದಿರದ ಭೂಮಿಪೂಜೆಗೆ ಆಗಮಿಸಬೇಕೆಂದು ಆಹ್ವಾನಿಸಿದ್ದು, ಭಾಗವಹಿಸಲು ಶ್ರೀಗಳು ಸಮ್ಮತಿ ಸೂಚಿಸಿದ್ದಾರೆ. ಇದೇ ವೇಳೆ ಅವರ ಅಮೃತ ಹಸ್ತದಿಂದ ಪುಣ್ಯಕ್ಷೇತ್ರಕ್ಕೆ ಮೃತ್ತಿಕೆ ಸ್ವೀಕರಿಸಲಾಯಿತು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರು ತಿಳಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ

Tue Jul 28 , 2020
ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆಯಾಗಿದ್ದು ಇದಕ್ಕೆ ತಕ್ಕ ಉತ್ತರ ನೀಡಿರುವಂತಹ ಭಾರತೀಯ ಸೇನಾ ಪಡೆ ಪ್ರತಿಯಾಗಿ ದಾಳಿಯನ್ನ ಮಾಡಿದ್ದು ಪಾಕಿಸ್ತಾನದ ಓರ್ವ ಯೋಧ ಬಲಿಯಾಗಿದ್ದು ೮ ಜನ ಯೋಧರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಗಡಿನಿಯಂತ್ರಣಾ ರೇಖೆಯಲ್ಲಿ ಹಾಜಿಪಿರ್, ಪೂಂಚ್, ಛಾಂಬ್‍ ಮತ್ತು ರಾಖ್ ಚಿಕ್ರಿ ಸೆಕ್ಟರ್‍ ಗಳಲ್ಲಿ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಮೂಲಗಳು ತಿಳಿಸಿವೆ. Please follow and like us:

Advertisement

Wordpress Social Share Plugin powered by Ultimatelysocial