ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಬಳಿ ಇರುವ ಗುಂಡಲಬಂಡ ಜಲಪಾತಕ್ಕೆ ಈಜಲು ಹೋಗಿದ್ದ ನಾಲ್ಕು ಮಂದಿ ನೀರಿನ ಮಧ್ಯೆಯೆ ಸಿಲುಕಿಕೊಂಡಿದ್ದಾರೆ. ಗುಂಡಲಬಂಡ ಜಲಪಾತಕ್ಕೆ ಪ್ರವಾಸಕ್ಕೆಂದು ಬಂದಿದ್ದ ನಾಲ್ವರು ದೇವದುರ್ಗ ತಾಲ್ಲೂಕಿನ ಮೂಡಲಗುಂಡ ಗ್ರಾಮದವರು ಎಂದು ತಿಳಿದು ಬಂದಿದೆ. ಈಜಲು ಹೋದ ನಾಲ್ಕು ಜನರಲ್ಲಿ ತಂದೆ ಮಗ ಇಬ್ಬರು ನೀರಲ್ಲಿ ಸಿಗದಂತೆ ಕೊಚ್ಚಿಕೊಂಡು ಹೋಗಿದ್ದಾರೆ. ಒಬ್ಬ ನೀರಿನ ಮಧ್ಯೆ ಸಿಲುಕಿಕೊಂಡಿದ್ದು, ಮತ್ತೋರ್ವ ನೀರಿನಲ್ಲಿ ಈಜಿಕೊಂಡು ದಡ ಸೇರಿಕೊಂಡಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಲಿಂಗಸೂಗೂರು ಪೋಲಿಸರು ಮತ್ತು ಲಿಂಗಸೂಗೂರು ವಿಭಾಗದ ಡಿವೈಎಸ್ಪಿ ಭೇಟಿ ನೀಡಿದ್ದರು.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಬಳಿ ಇರುವ ಜಲಪಾತ
Please follow and like us: