ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ರಾಜಹುಲಿಗೆ ಸ್ಥಾನ

80 ಬಿಜೆಪಿ ಸದಸ್ಯರೊಂದಿಗೆ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ರಚಿಸಿದ್ದು, ಸಮಿತಿಯಲ್ಲಿ ಕರ್ನಾಟಕದಿಂದ ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್, ಸಂಸದ ಪ್ರಲ್ಹಾದ್ ಜೋಷಿ ಗೆ ಸ್ಥಾನ ನೀಡಲಾಗಿದೆ.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೂ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ನೀಡಿದ್ದು, ಇದರೊಂದಿಗೆ ಸಂಸದ ಉಮೇಶ್ ಜಾಧವ್, ಸಚಿವರಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಗೋವಿಂದ ಕಾರಜೋಳ, ಡಾ.ಅಶ್ವತ್ಥ ನಾರಾಯಣ್ ಲಕ್ಷ್ಮಣ್ ಸವದಿಗೆ ವಿಶೇಷ ಆಹ್ವಾನಿತರ ಸ್ಥಾನ ನೀಡಲಾಗಿದೆ. 80 ಸಾಮಾನ್ಯ ಸದಸ್ಯರಲ್ಲದೆ, ಕಾರ್ಯಕಾರಣಿಯಲ್ಲಿ 50 ವಿಶೇಷ ಆಹ್ವಾನಿತರು ಮತ್ತು 179 ಖಾಯಂ ಆಹ್ವಾನಿತರು ಇರುತ್ತಾರೆ. 80 ಸದಸ್ಯರಲ್ಲಿ 37 ಮಂದಿ ಕೇಂದ್ರ ಸಚಿವರು ಮತ್ತು ರಾಜ್ಯದ ಹಲವಾರು ಸಚಿವರು ಸಮಿತಿಯ ಭಾಗವಾಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಮುಕೇಶ್‌ ಅಂಬಾನಿಗೆ ಮತ್ತೆ ಭಾರತದ ನಂ 1 ಶ್ರೀಮಂತ ಪಟ್ಟ..!

Thu Oct 7 , 2021
ನವದೆಹಲಿ: ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯನ್ನು ಪ್ರತಿಷ್ಠಿತ ನಿಯತಕಾಲಿಕ ಫೋಬ್ರ್ಸ್ ಪತ್ರಿಕೆಯು ಪ್ರಕಟಿಸಿದ್ದು, ರಿಯಾಲೆನ್ಸ್ ಸಂಸ್ಥೆಯ ಮಾಲೀಕ ಮುಕೇಶ್ ಅಂಬಾನಿ ಅವರು ದೇಶದ ನಂಬರ್ 1 ಶ್ರೀಮಂತರಾಗಿ ಮುಂದುರೆದಿದ್ದಾರೆ. ಕಳೆದ 14 ವರ್ಷದಿಂದಲೂ ಫೋಬ್ರ್ಸ್ ಪಟ್ಟಿಯಲ್ಲಿ ನಂಬರ್ 1 ಶ್ರೀಮಂತರಾಗಿ ಗುರುತಿಸಿಕೊಂಡಿರುವ ಮುಕೇಶ್ ಅಂಬಾನಿ ಕಳೆದ ವರ್ಷದಲ್ಲಿ ತಮ್ಮ ಗಳಿಕೆಯನ್ನು 4 ಬಿಲಿಯನ್ ಡಾಲರ್‍ಗೆ ಏರಿಸಿಕೊಳ್ಳುವ ಮೂಲಕ ಒಟ್ಟಾರೆ 92.7 ಮಿಲಿಯನ್ ಡಾಲರ್‍ನ ಒಡೆಯರಾಗಿದ್ದಾರೆ. ಭಾರತದ ಟಾಪ್ 10 ಶ್ರೀಮಂತರ […]

Advertisement

Wordpress Social Share Plugin powered by Ultimatelysocial