ರೆಡ್ಡಿ ಶ್ರೀರಾಮುಲು ಆಪ್ತತೆ ಬಗ್ಗೆ ಇಡೀ ನಾಡಿನ ಜನತೆಗೆ ಗೊತ್ತಿದೆ. ರಾಜಕೀಯವಾಘಿ ಅವರಿಬ್ಬರೂ ಎಷ್ಟು ಬಲಿಷ್ಠ ಸ್ಬೇಹಿತರು ಅನ್ನೋದಕ್ಕೆ 2008ರಲ್ಲಿ ಗಣಿನಾಡಿನಲ್ಲಿ ಕಮಲ ಅರಳಿಸಿದ್ದೇ ಸಾಕ್ಷಿ. ಬಿಜೆಪಿ ಗೆದ್ದು ಬರೋದಕ್ಕೆ ರೆಡ್ಡಿ ಬ್ರದರ್ಸ್ ಕಾರಣ ಅನ್ನೋದು ಗೊತ್ತಿರುವ ವಿಚಾರ.
ಇಷ್ಟು ಆಪ್ತರಾಗಿದ್ದ ಈ ಇಬ್ಬರು ಪ್ರಾಣ ಸ್ನೇಹಿತರ ಮಧ್ಯೆ ಬಿರುಕು ಮೂಡಿದ್ಯಾ ಅನ್ನೋ ಪ್ರಶ್ನೆ ಮೂಡಿದೆ . ಇದಕ್ಕೆ ಬಲವಾದ ಸಾಕ್ಷಿ ಎಂದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಗಣಿ ಉದ್ಯಮಿ ಗಾಲಿ ಜನಾರ್ದನರೆಡ್ಡಿ ಅವರ ಕುಟುಂಬದ ಕಾರ್ಯಕ್ರಮಕ್ಕೆ ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ಗೈರುಹಾಜರಾಗಿದ್ದು.
ಆದರೆ, ಶ್ರೀರಾಮುಲು ಅವರು ಪೂರ್ವ ನಿಗದಿತ ಕೆಲಸದ ಮೇಲೆ ಜೈಪುರದಲ್ಲಿರುವ ಕಾರಣ ರೆಡ್ಡಿ ಅವರ ಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಭಾಗವಹಿಸಲಿಲ್ಲ ಎಂದು ಸ್ಪಷ್ಟಪಡಿಸಿದರು.
ಗಾಲಿ ಜನಾರ್ಧನ ರೆಡ್ಡಿಯವರ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ನ್ಯಾಯಾಲಯದ ಅನುಮತಿ ಇಲ್ಲದೆ ಅವರು ಜಿಲ್ಲೆ ಪ್ರವೇಶಿಸುವಂತಿಲ್ಲ. ಬಿಜೆಪಿ ಕೂಡ ಇವರಿಂದ ದೂರ ಸರಿಯುತ್ತಿದೆ. ಈ ಬೆಳವಣಿಗೆಗಳು ರೆಡ್ಡಿ ಮತ್ತು ಶ್ರೀರಾಮುಲು ನಡುವೆ ಭಿನ್ನಾಭಿಪ್ರಾಯ ಮೂಡಿಸಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: