ರೈಲು ದುರಂತ ಹಿನ್ನೆಲೆ: ರಾಹುಲ್ ಗಾಂಧಿ ಸಂತಾಪ

ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಇಂದು  ಬೆಳಗ್ಗಿನ ಜಾವ ಗೂಡ್ಸ್ ರೈಲು ಹರಿದು 15 ಕಾರ್ಮಿಕರು ಸಾವನ್ನಪ್ಪಿರುವ ಘಟನೆಯ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತೀವ್ರ ಆಘಾತ ವ್ಯಕ್ತಪಡಿಸಿದರು.ಈ ಕುರಿತು  ಟ್ವೀಟ್ ಮಾಡಿರುವ  ಅವರು, ನನ್ನ ಕಾರ್ಮಿಕರು ಹಾಗೂ ಸಹೋದರರು ಗೂಡ್ಸ್ ರೈಲಿನಡಿ ಸಿಲುಕಿ ಸಾವನ್ನಪ್ಪಿರುವ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದೇನೆ. ರಾಷ್ಟ್ರನಿರ್ಮಾಣಕಾರರಾಗಿರುವ ವಲಸೆ ಕಾರ್ಮಿಕರು ಹಾಗೂ ದಿನಗೂಲಿ ಕಾರ್ಮಿಕರನ್ನು ದೇಶದಾದ್ಯಂತ ನಡೆಸಿಕೊಳ್ಳುತ್ತಿರುವ ರೀತಿಗೆ ನಾವು ನಾಚಿಕೆಪಡಬೇಕಾಗಿದೆ. ಮೃತ ಕಾರ್ಮಿಕರ ಕುಟುಂಬಗಳಿಗೆ ನನ್ನ ಸಂತಾಪ .ಅಪಘಾತದಲ್ಲಿ ಗಾಯಗೊಂಡವರು ಆದಷ್ಟು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುವೆ ಎಂದು ಟ್ವೀಟ್ ಮಾಡಿದ್ದಾರೆ.

ವರದಿ: ವೆಬ್ ಡೆಸ್ಕ್ ಸ್ಪೀಡ್  ನ್ಯೂಸ್ ಕನ್ನಡ

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಮತ್ತೆ 45 ಮಂದಿಯಲ್ಲಿ ಕೊರೊನಾ ಪತ್ತೆ

Fri May 8 , 2020
ರಾಜ್ಯದಲ್ಲಿ ಇಂದು ಮತ್ತೆ ಬರೋಬರಿ 45 ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕು ಪೀಡಿತರ ಸಂಖ್ಯೆ 750 ಕ್ಕೆ ಏರಿಕೆಯಾಗಿದೆ. ಈ ಕುರಿತು ರಾಜ್ಯ ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ. ಒಂದೇ ದಿನ ಇಷ್ಟು ಏಕಾಏಕಿ ಸೋಂಕಿತರ ಸಂಖ್ಯೆ ಕಂಡುಬಂದಿರುವುದು ಇದೇ ಮೊದಲು. ಇನ್ನು ಹೊಸದಾಗಿ ಸೋಂಕಿತರ ಪೈಕಿ ಭಟ್ಕಳದಲ್ಲಿ-12, ಬೆಳಗಾವಿ ಜಿಲ್ಲೆಯಲ್ಲಿ 11, ದಾವಣಗೆರೆ ಜಿಲ್ಲೆಯಲ್ಲಿ 14 ಬೆಂಗಳೂರಿನಲ್ಲಿ 7, ಬಳ್ಳಾರಿಯ […]

Advertisement

Wordpress Social Share Plugin powered by Ultimatelysocial