ದೀರ್ಘಕಾಲದ ಲಾಕ್ಡೌನ್ ನಂತರ ಇಂದು ರೈಲು ಸೇವೆ ಆರಂಭವಾಗಿದೆ. ೨೦೦ ರೈಲುಗಳು ವೇಳಾಪಟ್ಟಿ ಅನುಸಾರ ಸಂಚರಿಸಲಿದ್ದು, ಮೊದಲ ರೈಲು ಮಹಾನಗರಿ ಎಕ್ಸ್ಪ್ರೆಸ್ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ನಿಂದ ಉತ್ತರ ಪ್ರದೇಶದ ವಾರಣಾಸಿಗೆ ಪ್ರಯಾಣ ಬೆಳೆಸಿದೆ. ಮೊದಲ ರೈಲು ೦೧೦೯೨ ಸಿಎಸ್ಎಂಟಿ ಮುಂಬೈ-ವಾರಣಾಸಿ ವಿಶೇಷ ರೈಲು ೨೦೨೦ ಜೂನ್. ೧ರಂದು ೦೦.೧೦ಕ್ಕೆ ಹೊರಟಿದೆ ಎಂದು ಸೆಂಟ್ರಲ್ ರೈಲ್ವೆ ಇಲಾಖೆ ಟ್ವೀಟ್ ಮಾಡಿದೆ.
ಮೇ ೧೨ರಂದು ಸರಿಸುಮಾರು ೧.೪೫ ಲಕ್ಷ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಿದ್ದು, ಜೂ.೧ರಿಂದ ೩೦ರವರೆಗೆ ೨೬ ಲಕ್ಷಕ್ಕಿಂತಲೂ ಹೆಚ್ಚು ಮುಂಗಡ ಟಿಕೆಟ್ ಕಾಯ್ದಿರಿಸಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ರೈಲು ಸಂಚಾರ ಆರಂಭ
Please follow and like us: