ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ಮಧ್ಯೆಯೂ ೧.೭೬ ಲಕ್ಷ ಕೂಲಿ ಕಾರ್ಮಿಕರು ನರೇಗಾ ಮತ್ತಿತರ ಯೋಜನೆಯಡಿ ಕೆಲಸ ಮಾಡಿದ್ದರಿಂದ ಕಾರ್ಮಿಕರ ಖಾತೆಗೆ ಪಾವತಿಸಬೇಕಾದ ಹಣವನ್ನು ಇನ್ನೂ ೧೫ ದಿನಗಳಲ್ಲಿ ಬ್ಯಾಂಕ್ ಮೂಲಕವೇ ಪಾವತಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಕೂಲಿಗಾಗಿ ರೂ.೧೦೩೯ ಕೋಟಿ ಮತ್ತು ಸಾಮಾಗ್ರಿಗಳಿಗಾಗಿ ರೂ. ೮೨೧ ಕೋಟಿ ಸೇರಿ ಒಟ್ಟು ೧೮೬೧ ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದೆ. ೨೦೧೯-೨೦ರ ಸಾಲಿನಲ್ಲಿ ಬಾಕಿ ಇರುವ ಕೂಲಿ ೩೪೬ ಕೋಟಿ ರೂಪಾಯಿಯನ್ನು ಕಾರ್ಮಿಕರ ಖಾತೆಗೆ ನೇರವಾಗಿ ಪಾವತಿ ಮಾಡಲಾಗಿದೆ ಎಂದು ಹೇಳಿದರು.
ಲಾಕ್ಡೌನ್ ಮಧ್ಯೆಯೂ ಕೂಲಿ ಕಾರ್ಮಿಕರಿಗೆ ಉದ್ಯೋಗ ಸೃಷ್ಠಿ
Please follow and like us: