ಕೋವಿಡ್-19 ಲಾಕ್ಡೌನ್ ಸಂದರ್ಭದಲ್ಲಿ ಇಡೀ ದೇಶವೇ ಸಮಸ್ಯೆಯಲ್ಲಿ ಮುಳುಗೇಳುತ್ತಿರುವಂತಹ ಹೊತ್ತಿನಲ್ಲಿ ಅತ್ತ ದೂರದ ನಿರ್ಜನ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳ ಮಾರಣಹೋಮ ಎಗ್ಗಿಲ್ಲದಂತೆ ನಡೆದಿದೆ. ಲಾಕ್ ಡೌನ್ ಆರಂಭವಾಗುವ ಹಿಂದಿನ ಆರು ವಾರ ಫೆಬ್ರವರಿ.10 ರಿಂದ ಮಾರ್ಚ್.22 ಮತ್ತು ಲಾಕ್ ಡೌನ್ ಆರಂಭವಾದ ನಂತರ ಆರು ವಾರ ಮಾರ್ಚ್.23 ರಿಂದ ಮೇ.3 ರ ವರೆಗಿನ ಸಮಯದಲ್ಲಿ ವನ್ಯಜೀವಿಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ಆ ಅಧ್ಯಯನದಲ್ಲಿ ಕಂಡುಬಂದಿರುವ ಅಂಕಿ-ಅಂಶಗಳ ಪ್ರಕಾರ, ಲಾಕ್ಡೌನ್ ಅವಧಿಯಲ್ಲಿ ಬೇಟೆ ಪ್ರಕರಣಗಳು ಶೇ 35ರಿಂದ 88ರವರೆಗೆ ಹೆಚ್ಚಾಗಿದೆ ಎಂದು ಎಲ್ಲಾ ರಾಜ್ಯಗಳ ವನ್ಯಜೀವಿ ಸಂರಕ್ಷಣಾ ವಲಯಗಳಿಗೆ ಬೇಟಿ ನೀಡಿದ ಡಬ್ಲ್ಯೂಡಬ್ಲ್ಯೂಎಫ್-ಇಂಡಿಯಾ ವರದಿ ಮಾಡಿದೆ. ಈ ವರದಿಯು ಪ್ರತ್ಯೇಕವಾಗಿ ಉತ್ತರಾಖಂಡ, ಕರ್ನಾಟಕ, ಒಡಿಶಾಗಳಲ್ಲಿ ಪೆಂಗೋಲಿನ್ಗಳ ಬೇಟೆ ಅತಿಹೆಚ್ಚಾಗಿ ಕಂಡುಬಂದಿದೆ. ಹಾಗೇ ರಾಜಸ್ಥಾನದಲ್ಲಿ ಸಾರಂಗಗಳ ಬೇಟೆ ಅವ್ಯಾಹತವಾಗಿ ನಡೆದಿದೆ. ಇನ್ನುಳಿದ ರಾಜ್ಯಗಳಲ್ಲಿ ಕೋತಿಗಳು, ಪುನುಗು ಬೆಕ್ಕು ಮತ್ತಿತರ ಪ್ರಾಣಿಗಳನ್ನು ಹತ್ಯೆ ಮಾಡಲಾಗಿದೆ. ವನ್ಯಜೀವಿಗಳ ಬೇಟೆಗೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 222 ಜನರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ