ವಿಜಯಪುರದ ದಲಿತ ಸಂಘರ್ಷ ಸಮಿತಿಯ ಮನವಿ

ಡಾ ಬಾಬಾ ಸಾಹೇಬ್ ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ರಾಜ್ಯದ ಡಿ ಎಸ್ ಎಸ್ ಸಂಘಟನೆ ದೀನರ,ದುರ್ಬಲ, ಮಹಿಳೆಯರ, ಮಕ್ಕಳ ಮೇಲಿನ ದೌರ್ಜನ್ಯಗಳನ್ನು ಎದುರಿಸುತ್ತಾ ಕೊಲೆ,ಸುಲಿಗೆ ,ಸಾಮಾಜಿಕ ಬಹಿಷ್ಕಾರ, ಇನ್ನಿತರೆ ಪ್ರಕರಣಗಳಿಗೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ ವಿಜಯಪುರ ಜಿಲ್ಲೆ ಉಪವಿಭಾಗದ ಅಧಿಕಾರಿ ಡಿ ವೈ ಎಸ್ ಪಿ ಶ್ರೀ.ಎಂ.ಬಿ ಸಂಕದ ಅವರು ದಲಿತರ ಮೇಲೆ ದೌರ್ಜನ್ಯ ನಡೆಯಲು ನೇರ ಕಾರಣರಾಗಿದ್ದಾರೆ. ಇವರ ಕರ್ತವ್ಯದಲ್ಲಿ ಬಹುತೇಕ ದೌರ್ಜನ್ಯ ಪ್ರಕರಣಗಳು “ಬಿ ” ರಿಪೋರ್ಟ್ ಹಾಕಿದ್ದಾರೆ. ಇವರ ವ್ಯಾಪ್ತಿಯಲ್ಲಿ ಇನ್ನೂ ಕೂಡಾ ಅಸ್ಪ್ರಶ್ಯತೆ ಜೀವಂತವಾಗಿದ್ದು, ದಲಿತರ ಮೇಲೆ ಹಲವಾರು ಕೇಸ್ ದಾಖಲು ಮಾಡಿ ದೌರ್ಜನ್ಯ ಎಸುಗುತ್ತಿದ್ದಾರೆ. ಇದನ್ನು ಪ್ರಶ್ನಿಸಿದ ದಲಿತ ಚಳುವಳಿಗಾರ ಜಿಲ್ಲಾ ಸಂಘಟನಾ ಸಂಚಾಲಕ ವೈ.ಸಿ ಮಯೂರ ಅವರ ಮೇಲೆ ಸುಳ್ಳು ಕೇಸ್ ದಾಖಲಿಸಿ ವೈಯಕ್ತಿಕ ದ್ವೇಷ ಸಾದಿಸುತ್ತಿದ್ದಾರೆ. ಆದ್ದರಿಂದ  ಡಿ ಎಸ್ ಎಸ್ ದಲಿತ ಹೋರಾಟಗಾರರು ತಕ್ಷಣವೇ ಎಂ.ಬಿ ಸಂಕದ ರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಆಗ್ರಹಸಿ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಹಳ್ಳಿಗಳಲ್ಲಿ ಕೊರೊನಾದಿಂದ ಮರಣ ಮೃದಂಗ

Wed Jul 22 , 2020
ಹಳ್ಳಿಗಳಲ್ಲಿ ಕೊರೊನಾದಿಂದ ಮರಣ ಮೃದಂಗವಾಗುತ್ತಿದೆ.ಮುಂದಿನ ಮೂರು ತಿಂಗಳು ಹಳ್ಳಿಗಳಿಗೆ ಕಂಟಕ ಎಂದು ಜಗತ್ ಪ್ರಸಿದ್ಧ ಸು ಕ್ಷೇತ್ರ ಕೋಡಿಮಠದ ಶ್ರೀ ಶಿವಾನಂದ ಶಿವಾಚಾರ್ಯ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.ಹಳ್ಳಿಗಳ ಜನರು ಎಚ್ಚರದಿಂದ ಇರಬೇಕು ಎಂದು ಸ್ವಾಮೀಜಿ ಮನವಿ ಮಾಡಿಕೊಂಡಿದ್ದು, ಸ್ಚಚ್ಛತೆ, ಸುರಕ್ಷತೆ, ಅಂತರ ಕಾಪಾಡಿ ಎಂದು ಎಚ್ಚರಿಸಿದ್ದಾರೆ. ಸರ್ಕಾರದ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ. ಕೊರೊನಾ ಗಾಳಿಯಲ್ಲಿ ಸಂಚಾರ ಮಾಡೋದು ಕಡಿಮೆ, ಸರ್ಕಾರದ ತೀರ್ಮಾನಗಳು ಕೊರೊನಾ ಕಾಯಿಲೆ ಹೆಚ್ಚು ಮಾಡಿದ್ದು ಮತ್ತೊಂದು […]

Advertisement

Wordpress Social Share Plugin powered by Ultimatelysocial