ಮಂಡ್ಯ: ಮಂಡ್ಯದಲ್ಲಿ ಶಾಸಕನ ಪುತ್ರನೊಬ್ಬ ಮನೆ ಸಮೀಪ ಕೊರೊನಾ ಟೆಸ್ಟ್ ಮಾಡಬೇಡಿ ಎಂದು ಕ್ಯಾತೆ ತೆಗೆದು ಮಾಧ್ಯಮದ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಮಂಡ್ಯ ಎಂಎಲ್ಸಿ ಕೆ.ಟಿ ಶ್ರೀಕಂಠೇಗೌಡ ಮಗ ಹಲ್ಲೆ ನಡೆಸಿದ್ದಾನೆ. ಪತ್ರಕರ್ತರಿಗೆ ಕೋವಿಡ್ ಟೆಸ್ಟ್ ನಡೆಸಲು ಶಾಸಕ ಶ್ರೀಕಂಠೇಗೌಡ ಮನೆ ಸಮೀಪದ ಅಂಬೇಡ್ಕರ್ ಭವನದಲ್ಲಿ ಜಾಗ ಗುರುತು ಮಾಡಲಾಗಿತ್ತು. ಅಂಬೇಡ್ಕರ್ ಭವನಕ್ಕೆ ಪತ್ರಕರ್ತರು ಆಗಮಿಸುತ್ತಿದ್ದಂತೆ ಶ್ರೀಕಂಠೇಗೌಡ ಮಗ ಮಾಧ್ಯಮದವರ ಮೇಲೆ ಗಲಾಟೆ ಮಾಡಿ ಹಲ್ಲೆ ನಡೆದಿದ್ದಾರೆ. ಸದ್ಯ ಶಾಸಕನ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.
ಶಾಸಕ ಮಗನ ದರ್ಪ: ಮಾಧ್ಯಮ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಮೇಲೆ ಹಲ್ಲೆ ಯತ್ನ
Please follow and like us: