ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದಗಣಿ ಯಿಂದ ಯಲಗಟ್ಟಿವರಿಗೂ ಸಂಪೂರ್ಣವಾಗಿ ಹದಿಗೆಟ್ಟು ಹೋದ ರಸ್ತೆಯ ಬಗ್ಗೆ ಗಮನ ಶಾಸಕರು ಮತ್ತು ಅಧಿಕಾರಿಗಳು ಗಮನ ಹರಿಸಬೇಕು. ಇನ್ನು ರಸ್ತೆಯ ಪಕ್ಕದಲ್ಲಿ ವಿದ್ಯುತ್ ಕಂಬ ಇರೋದ್ರಿಂದ ಗಾಳಿ ಮಳೆಗೆ ರಸ್ತೆಯ ಮೇಲೆ ವೈರಗಳು ಬಿದ್ದಿದ್ದು, ವಾಹನ ಸವಾರರಿಗೆ ಭಯದಿಂದ ರಸ್ತೆಯ ಮೇಲೆ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಅತಿಹೆಚ್ಚು ದೇವದುರ್ಗ ತಾಲೂಕಿನ ಜಾಲಹಳ್ಳಿ ಅಕ್ಕ ಪಕ್ಕದ ಗ್ರಾಮ, ಲಿಂಗದಹಳ್ಳಿ ಬಾಗೂರು ಗ್ರಾಮದಲ್ಲಿ ಕೃಷ್ಣ ನದಿಯಿಂದ ಈ ರಸ್ತೆಯ ಮೇಲೆ ಮರಳು ಗಾಡಿಗಳು ಓಡಾಡುವುದರಿಂದ ರಸ್ತೆ ಆಳು ಆಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಈ ಕಡೆ ಗಮನ ಹರಿಸಬೇಕು ಆದಷ್ಟು ಬೇಗನೆ ರಸ್ತೆ ಕಾಮಗಾರಿ ಪ್ರಾರಂಭ ಮಾಡಬೇಕು ಎಂದು ವಾಹನ ಸವಾರರು ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಂಪೂರ್ಣವಾಗಿ ಹದಿಗೆಟ್ಟು ರಸ್ತೆ
Please follow and like us: