ಸರ್ಕಾರದ ನೀತಿಗಳೇ ಕೊರೊನಾ ಹೆಚ್ಚಾಗಲು ಕಾರಣ

ಕೊರೊನಾಗೆ ಲಸಿಕೆಯಿಲ್ಲ. ಸಾಮಾಜಿಕ ಅಂತರ ಇದಕ್ಕೆ ಮದ್ದು ಎಂದು ಮಾಜಿ ಸಿಎಂ  ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರದ ನೀತಿಗಳೇ ಕೊರೊನಾ ಹೆಚ್ಚಾಗಲು ಕಾರಣ. ಲಾಕ್ ಡೌನ್ ಸಡಿಲಿಕೆ ಇದಕ್ಕೆ ಕಾರಣ. ಜನರು ಇದ್ರ ಬಗ್ಗೆ ಜಾಗೃತರಾಗಿಲ್ಲ. ವಿದ್ಯಾವಂತರು ಕೂಡ ಮಾಸ್ಕ್ ಹಾಕಿಕೊಳ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ತಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಲಾಕ್ ಡೌನ್ ಸಡಿಲಿಕೆ ನಂತ್ರ ಪ್ರಕರಣ ಹೆಚ್ಚಾಗಿ ಕಂಡು ಬರ್ತಿದೆ. ಲಾಕ್ ಡೌನ್ ಸಡಿಲಿಕೆ ನಂತ್ರ ಜನರ ಓಡಾಟ ಎಂದಿನಂತೆ ಕಂಡು ಬರ್ತಿದ್ದು, ಇದು ರಾಜ್ಯಕ್ಕೆ ಮತ್ತಷ್ಟು ಆತಂಕ ತರುವ ಸಾಧ್ಯತೆಯಿದೆ. ಇಂದು ರಾಜ್ಯದಲ್ಲಿ 36 ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಹೀಗೆ ಮುಂದುವರೆದ್ರೆ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಿದರು.

ವರದಿ:ಪೊಲಿಟಿಕಲ್ ಬ್ಯೂರೋ  ಸ್ಪೀಡ್  ನ್ಯೂಸ್  ಕನ್ನಡ

Please follow and like us:

Leave a Reply

Your email address will not be published. Required fields are marked *

Next Post

೮.೫೧ಲಕ್ಷ ಟನ್ ಆಹಾರ ಧಾನ್ಯ ಪೊರೈಕೆ

Sat May 9 , 2020
ರಾಜ್ಯದ ೪.೦೧ ಕೋಟಿ ಪಡಿತರ ಚೀಟಿದಾರರಿಗೆ ಮೂರು ತಿಂಗಳ ಮಟ್ಟಿಗೆ ಪಡಿತರ ವಿತರಣೆಗಾಗಿ ಕೇಂದ್ರ ಸರ್ಕಾರ ೮.೫೧ ಮೆಟ್ರಿಕ್ ಲಕ್ಷ ಟನ್ ಉಚಿತ ಆಹಾರ ಧಾನ್ಯಗಳನ್ನು ಪೂರೈಸಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳಿಗೆ ೨.೧ಲಕ್ಷ ಟನ್ ಆಹಾರ ಧಾನ್ಯಗಳನ್ನು ನಿಗದಿಪಡಿಸಲಾಗಿದೆ. ಲಾಕ್‌ಡೌನ್ ಆದಾಗಿನಿಂದ ರಾಜ್ಯಕ್ಕೆ ೩೦೨ ರೈಲು ಲೋಡ್ ಆಹಾರ ಧಾನ್ಯಗಳನ್ನು ಕಳುಹಿಸಲಾಗಿದೆ ಹಾಗೂ ಅದಕ್ಕಾಗಿ ೨,೩೫೧ಕೋಟಿ ವೆಚ್ಚ ಭರಿಸುತ್ತಿದೆ ಎಂದು ಭಾರತ ಆಹಾರ […]

Advertisement

Wordpress Social Share Plugin powered by Ultimatelysocial