ಸರ್ಕಾರದ ವಿರುದ್ಧ ನಾನು ಸುಖಾಸುಮ್ಮನೆ ಆರೋಪ ಮಾಡಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು,ದಾಖಲೆ ಇಟ್ಟು ನಾನು ಮಾತಾಡುತ್ತೇನೆ .ಸಂವಿಧಾನಿಕ ಸಂಸ್ಥೆಗಳ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಜನತೆಯ ದುರಾದೃಷ್ಟ ಪ್ರವಾಹ ಮತ್ತು ಕೋವಿಡ್ ಅನುಭವಿಸುತ್ತಿದ್ದಾರೆ. ಸರ್ಕಾರ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ. ಸರ್ಕಾರದ ವೈಫಲ್ಯಗಳನ್ನ ನಾವು ಮನೆಮನೆಗೆ ತಲುಪಿಸಬೇಕಿದೆ. ಕಾರ್ಯಕರ್ತರು ಈ ವಿಷಯವನ್ನ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಸರ್ಕಾರದ ವಿರುದ್ಧ ಸುಮ್ಮನೆ ಆರೋಪ ಮಾಡಲ್ಲ
Please follow and like us: