ರಾಯಚೂರು: ಕೊರೋನಾ ಮಹಮಾರಿಗೆ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಉಳ್ಳವರು ನಾವಾಯ್ತು ನಮ್ಮ ಮನೆಯಾಯ್ತು ಎಂದು ಕುಳಿತಿರುವಾಗ ಇಲ್ಲೊಬ್ಬ ಜನನಾಯಕಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಪ್ರತಿ ಹಳ್ಳಿ-ಹಳ್ಳಗಳಿಗೆ ತೆರಳಿ ಹಸಿದ ಕುಟುಂಬಗಳಿಗೆ ಅಕ್ಕಿ, ಬೆಳೆ, ಸಕ್ಕರೆ, ಎಣ್ಣೆ ಹಾಗೂ ತರಕಾರಿಗಳನ್ನು ಸಹ ನೀಡುವ ಮೂಲಕ ನೊಂದವರ ಬದುಕಿಗೆ ಆಶಾಕಿರಣವಾಗುತ್ತಿದ್ದಾರೆ. ಇವರು ಬೇರೆ ಯಾರೂ ಅಲ್ಲ ಅವರು ದಿವಂಗತ ಮಾಜಿ ಸಂಸದ ಎ.ವೆಂಕಟೇಶ ನಾಯಕರ ಮೊಮ್ಮಗಳು ಶ್ರೀದೇವಿ. ನಿರ್ಗತಿಕರಿಗೆ, ಅಲೆಮಾರಿ ಕುಟುಂಬಕ್ಕೆ ಹಾಗೂ ಕಡು ಬಡವರಿಗೆ ದಿನಸಿ ಸಾಮಾಗ್ರಿಗಳು ಸೇರಿದಂತೆ ತರಕಾರಿಗಳ ಕಿಟ್ ವಿತರಣೆ ಮಾಡಿದರು.
ಸಹಾಯ ಹಸ್ತ ನೀಡಿದ ಶಾಸಕರ ಮೊಮ್ಮಗಳು
Please follow and like us: