ಜುಲೈ ತಿಂಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತೆ ಅಂತಾ ಮೊದಲೇ ಹೇಳಿದ್ದೆ. ಕೊರೊನಾ ಟೆಸ್ಟ್ಗಾಗಿ ಈಗ ೮೦ ಲ್ಯಾಬ್ ಗಳನ್ನು ತೆರೆಯಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಮೊದಲೇ ಸಭೆಯಲ್ಲಿ ಲ್ಯಾಬ್ ತೆರೆಯುವಂತೆ ಸೂಚಿಸಲಾಗಿತ್ತು. ಈಗ ೮೦ ಲ್ಯಾಬ್ ಗಳನ್ನು ತೆರೆಯಲಾಗಿದೆ. ರಾಜ್ಯದಲ್ಲಿ ಎರಡು ಇದ್ದ ಲ್ಯಾಬ್ಗಳನ್ನು ೮೦ಕ್ಕೆ ಏರಿಸಲಾಗಿದೆ. ಇದೇ ವೇಳೆ ಬೆಂಗಳೂರು ಕೊರೊನಾ ನಿರ್ವಹಣಾ ಉಸ್ತುವಾರಿ ಯಾರು ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಸಿದ ಅವರು, ನಾನು ಪೋರ್ಟ್ ಪೋಲಿಯೋ ಮಿನಿಸ್ಟರ್. ಸಚಿವ ಅಶೋಕ್ಗೆ ಬೆಂಗಳೂರು ನೋಡಿಕೊಳ್ಳಲು ಸಿಎಂ ಹೇಳಿದ್ರು ಅದರಂತೆ ನೋಡ್ಕೋತಿದ್ದಾರೆ ಎಂದು ಸಚಿವ ಸುದಾಕರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿವÀ ಅಶೋಕ್ ನನ್ನ ಅನುಪಸ್ಥಿತಿಯಲ್ಲಿ ಬಹಳ ಚೆನ್ನಾಗಿ ನಿರ್ವಹಿಸಿದ್ರು, ಅವರು ಹಿರಿಯರು, ಪರಿಣಾಮಕಾರಿಯಾಗಿ ಓಡಾಡ್ಕೊಂಡು ಬಹಳ ಚೆನ್ನಾಗಿ ನಗರದಲ್ಲಿ ನಿಭಾಯಿಸ್ತಿದಾರೆ. ನಮ್ಮಲ್ಲಿ ಯಾರಿಗೂ ಗೊಂದಲ ಇಲ್ಲ. ಕೊರೋನಾ ನಿರ್ವಹಣೆಯ ಕಿಂಗ್, ಕ್ಯಾಪ್ಟನ್ ಸಿಎಂ ಬಿ.ಎಸ್. ಯಡಿಯೂರಪ್ಪನವರು. ಸಿಎಂ ಸೂಚನೆಯಂತೆ ನಾವೆಲ್ಲ ಕೆಲಸ ಮಾಡ್ತಿದ್ದೇವೆ. ನಾವೆಲ್ಲ ಸಾಮೂಹಿಕವಾಗಿ ಕೊರೋನಾ ನಿಯಂತ್ರಣಕ್ಕೆ ಕಾರ್ಯ ನಿರ್ವಹಿಸ್ತೇವೆ, ಇದರಲ್ಲಿ ನಾವ್ಯಾರೂ ರಾಜಕೀಯ ಮಾಡಲ್ಲ ಎಂದು ಹೇಳಿದರು.
ಸಿಎಂ ಕೊರೊನಾ ನಿರ್ವಹಣೆಯ ಕಿಂಗ್ -ಸಚಿವ ಸುಧಾಕರ್
Please follow and like us: