ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನವರ ಆಪ್ತನ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಇಂದು ದಿಢೀರ್ ದೆಹಲಿ ಪ್ರವಾಸ ಮಾಡಿದ್ದಾರೆ. ಅಷ್ಟಕ್ಕೂ ಸಿಎಂ ಬೊಮ್ಮಾಯಿ ದೆಹಲಿಗೆ ತರಾತುರಿಲ್ಲಿ ಯಾಕೆ ಹೋದ್ರು.? ಬಿಎಸ್ ವೈ ಆಪ್ತನ ಮನೆ ಮೇಲೆ ಐಟಿ ರೇಡ್ ಆಗಿದ್ದಕ್ಕೆ ಸಿಎಂ ದೆಹಲಿಗೆ ಹೊದ್ರಾ..? ಅಥವಾ ಸಚಿವ ಸಂಪುಟ ವಿಸ್ತರಣೆಗೆ ಸಿಎಂ ದೆಹಲಿಗೆ ತೆರಳಿದರಾ.? ಈ ಎಲ್ಲಾ ಪ್ರಶ್ನೆಗಳು ಈಗ ಬಿಜೆಪಿ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿವೆ.
ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಿಎಂ ಪಟ್ಟಕ್ಕೇರಿದ ಬಳಿಕ ಇದು ನಾಲ್ಕನೇ ಬಾರಿಗೆ ಸಿಎಂ ದೆಹಲಿ ಪ್ರವಾಸ ಮಾಡಿದ್ದಾರೆ…ಒಂದು ಕಡೆ ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆ ಸವಾಲಿನ ನಡುವೆ ಸಿಎಂ ದೆಹಲಿ ಪ್ರವಾಸ ಮಾಡಿರುವುದು ಬಹಳ ಕೂತೂಹಲಕಾರಿಯಾಗಿದೆ. ಮತ್ತೊಂದು ಕಡೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನ ಆಪ್ತನ ಮನೆ ಮೇಲೆ ಐಟಿ ದಾಳಿ ಮಾಡಿರುವುದು,ಮತ್ತೊಂದು ಎಡೆ ಸಚಿವ ಸಂಪುಟ ವಿಸ್ತರಣೆಯಗೆ ಶಾಸಕರು ಒತ್ತಡ ಏರುತ್ತಿರುವುದು ಇದರ ನಡುವೆಯೇ ಸಿಎಂ ದೆಹಲಿಗೆ ಪ್ರವಾಸ ಮಾಡಿರುವುದು ಹೆಚ್ಚು ಮಹತ್ವ ಪಡೆದುಕೊಂಡಿದೆ…
ನಿನ್ನೆ ಬೆಳಗ್ಗೆ ಯಿಂದ ರಾತ್ರಿವರೆಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತನ ಮನೆಯಲ್ಲಿ ನಡೆದ ಆದಾಯ ತೆರಿಗೆ ಅಧಿಕಾರಿಗಳ ಶೋಧ ,ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದ್ರ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಅವರು ತರಾತುರಿಯಲ್ಲಿ ದೆಹಲಿಗೆ ಪ್ರವಾಸ ಕೈಗೊಂಡಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಇಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಸಿಎಂ ಹೊರಟ್ಟಿದ್ದು, ಇಂದು ರಾತ್ರಿಯೇ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಇಂದು ಸಿಎಂ ಬೊಮ್ಮಾಯಿ ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಸಚಿವ ಮನಸುಖ್ ಮಾಂಡವಿಯರನ್ನು ಸಿಎಂ ಭೇಟಿಯಾಗಿ ಚರ್ಚೆ ಮಾಡಲಿದ್ದಾರೆ.ಆದ್ರೆ ಇದರ ನಡುವೆ ಬಿಎಸ್ ವೈ ಆಪ್ತನ ಮನೆ ಮೇಲೆ ಐಟಿ ರೇಡ್ ಬೆನ್ನಲ್ಲೇ ಒಂದು ದಿನದ ಮಟ್ಟಿಗೆ ದೆಹಲಿ ಪ್ರವಾಸ ಮಾಡಿರುವುದು ಕಮಲ ಪಾಳ್ಯದಲ್ಲೇ ಚರ್ಚೆಗೆ ಕಾರಣವಾಗಿದೆ.ಹೀಗಾಗಿ ಸಿಎಂ ಹೈಕಾಂಡ್ ವರಿಷ್ಠರನ್ನು ಭೇಟಿ ಮಾಡಿ ನಡೆಸಲಿರುವ ಚರ್ಚೆ ಇದೀಗ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಒಂದು ಕಡೆ ಸಿಎಂ ದೆಹಲಿ ಭೇಟಿಗೆ ಸಿದ್ಧತೆ ನಡೆಸಿದಾಗಲೇ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ಮತ್ತೆ ರೀ ಓಪನ್ ಆಗಿದೆ. ಸಾಲು ಸಾಲು ಚುನಾವಣೆಗಳು ಸದ್ಯದಲ್ಲೇ ಇರುವುದರಿಂದ ಸಹಜವಾಗಿಯೇ ಸಚಿವ ಸಂಪುಟ ವಿಸ್ತರಣೆ ಆಗಬೇಕು ಎಂಬ ಒತ್ತಡ ಸಿಎಂ ಮೇಲೆ ಇದೆ… ಇನ್ನು ಸಚಿವ ಸಂಪುಟಕ್ಕಾಗಿ ಕಾಯುತ್ತಿರುವ ಆಕಾಂಕ್ಷಿಗಳು,ಸಿಎಂ ದೆಹಲಿ ಪ್ರವಾಸದ ವೇಳೆ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ಪಡೆದುಕೊಳ್ಳುವಂತೆ ಒತ್ತಾಡ ಹೇರಿದ್ದಾರೆ ಎಂದು ಎನ್ನಲಾಗಿದೆ.. ಇದರ ಜೊತೆಗೇ ಸಿಂಧಗಿ ಮತ್ತು ಹಾನಗಲ್ ಕ್ಷೇತ್ರಗಳ ಬೈ ಎಲೆಕ್ಷನ್ ಕೂಡ ಇದ್ದು, ರಾಜ್ಯ ಬಿಜೆಪಿಯ ಸ್ಥಿತಿಗತಿ ಬಗ್ಗೆ ಸಿಎಂ ಹೈಕಮಾಂಡ್ ಗಮನಕ್ಕೆ ತರುವ ಸದ್ಯತೆ ಇದೆ.
ಒಟ್ಟಾರೆಯಾಗಿ ಬಿಎಸ್ ಯಡಿಯೂರಪ್ಪ ನವರ ಆಪ್ತನ ಮನೆ ಮೇಲೆ ಐಟಿ ರೇಡ್ ನಡೆದ ಬೆನ್ನಲ್ಲೇ ಸಿಎಂ ಗೆ ಹೈಕಮಾಂಡ್ ಬುಲಾವ್ ಕೊಟ್ಟಿದ್ದು,ಮತ್ತೊಂದೆಡೆ ಸಿಎಂ ದೆಹಲಿ ಭೇಟಿ ಒಂದೇ ದಿನಕ್ಕೆ ಮುಗಿಯಲಿದ್ದು, ಈ ಒಂದು ದಿನದಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ದೆಹಲಿ ಯಿಂದ ಸಿಎಂ ಬೊಮ್ಮಾಯಿ ಸಿಹಿ ಸುದ್ಧಿ ತರುವರೋ ಅಥವಾ ಸಚಿವ ಆಕಾಂಕ್ಷಿಗಳಿಗೆ ತಣ್ಣೀರೆರಚುವರೋ ಕಾದು ನೋಡಬೇಕಿದೆ.