ಸುಶಾಂತ್ ಸಾವಿನ ರಹಸ್ಯ ಇನ್ನೂ ನಿಗೂಢ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ರಹಸ್ಯ ಇನ್ನೂ ನಿಗೂಢವಾಗಿದೆ. ಇದೀಗ ಪೊಲೀಸರು ಸುಶಾಂತ್ ಚಿಕಿತ್ಸೆ ಪಡೆಯುತ್ತಿದ್ದ ವೈದ್ಯರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ವೈದ್ಯರೊಬ್ಬರು ಸುಶಾಂತ್ ಎಲ್ಲರ ಮೇಲಿನ ನಂಬಿಕೆ ಕಳೆದುಕೊಂಡಿದ್ದರು ಎಂದು ಹೇಳಿದ್ದಾರೆ.೨೦೧೯ ನವೆಂಬರ್ ನಿಂದ ಸುಶಾಂತ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಈ ಸಂಬAಧ ಮೂವರು ಮನೋ ವೈದ್ಯರಿಂದ ಮುಂಬೈ ಪೊಲೀಸರು ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಸುಶಾಂತ್ ಬಾಯಿಪೊಲಾರ್ ಡಿಸ್ ಆರ್ಡರ್ ನಿಂದ ಬಳಲುತ್ತಿದ್ದರು. ಸುಶಾಂತ್ ತುಂಬಾನೇ ಒತ್ತಡದಲ್ಲಿರೋದು ನಮ್ಮ ಗಮನಕ್ಕೂ ಬಂದಿತ್ತು. ಆದ್ರೆ ಈ ಒತ್ತಡಕ್ಕೆ ಕಾರಣ ಏನು ಎಂಬುವುದು ನಮಗೆ ತಿಳಿದಿಲ್ಲ. ಸುಶಾಂತ್ ತಮಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಮೇಲೆ ನಂಬಿಕೆ ಹೊಂದಿರಲಿಲ್ಲ. ಹಾಗಾಗಿ ವಿಷಯಗಳನ್ನು ಗುಟ್ಟಾಗಿ ಇಟ್ಟುಕೊಳ್ಳುತ್ತಿದ್ದರು ಎಂದು ವೈದ್ಯರೊಬ್ಬರು ಪೊಲೀಸರಿಗೆ ಹೇಳಿದ್ದಾರೆ ಎನ್ನಲಾಗಿದೆ. ವೈದ್ಯರ ಮೇಲೆ ವಿಶ್ವಾಸವಿಲ್ಲದ ಕಾರಣ ಮೂವರು ಬಳಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇನ್ನೂ ಚಿಕಿತ್ಸೆಗೂ ಎರಡ್ಮೂರು ಬಾರಿ ಮಾತ್ರ ಭೇಟಿ ನೀಡಿದ್ದರು. ವೈದ್ಯರು ನೀಡಿದ ಮಾತ್ರೆಗಳನ್ನು ಸಹ ಸುಶಾಂತ್ ತೆಗೆದುಕೊಳ್ಳುತ್ತಿರಲಿಲ್ಲ. ಕೊನೆಯ ವೈದ್ಯರು ಸಹ ಸುಶಾಂತ್ ಗೆ ಬಾಯಿಪೊಲಾರ್ ಡಿಸ್ ಆರ್ಡರ್ ಚಿಕಿತ್ಸೆ ನೀಡಿದ್ದರು. ವೈದ್ಯರ ಹೇಳಿಕೆ ಪ್ರಕಾರ, ಸುಶಾಂತ್ ಒತ್ತಡದಲ್ಲಿ ಸಿಲುಕಿದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಖಚಿತವಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಸ್ವಚ್ಛತೆಗೆ ಪ್ರಥಮ ಬಹುಮಾನ ಪಡೆದಿರುವ ಅರಸೀಕೆರೆ

Tue Jul 21 , 2020
ಸ್ವಚ್ಛಂದಕ್ಕೆ ಹೆಸರುವಾಸಿಯಾಗಿರುವ ಹಾಗೂ ರಾಜ್ಯದಲ್ಲಿ ಸ್ವಚ್ಛತೆಗೆ ಪ್ರಥಮ ಬಹುಮಾನ ಪಡೆದಿರುವ ಅರಸೀಕೆರೆ. ಈ ಸುಂದರ ನಗರಕ್ಕೆ ಒಳಚರಂಡಿ ವ್ಯವಸ್ಥೆ, ಕಾಲುವೆಗಳು ಹಾಗೂ ರಾಜಕಾಲುವೆಗಳು ಇಲ್ಲ.ಮತ್ತು ಕೆಲವು ದಿನಗಳಿಂದ  ಸುರಿಯುತ್ತಿರುವ ಮಳೆಯಿಂದ  ಸಮರ್ಪಕವಾಗಿ ಕೊಳಚೆ ನೀರು ಹೋಗಲು ಯಾವುದೇ ಸುಸ್ಥಿತಿ ಅಕ್ರಮ ಕೈಗೊಂಡಿಲ್ಲ. ಇದಕ್ಕೆ ಉದಾಹರಣೆ  ಅರಸೀಕೆರೆಯ ಪ್ರಸಿದ್ಧ ಜುಮ್ಮಾ ಮಸೀದಿ ರಸ್ತೆಯ, ಹಾಸನದ ನಾಗಭೂಷಣ್ ಆಸ್ಪತ್ರೆಯ ಪಕ್ಕದಲ್ಲಿರುವ ರಾಜಕಾಲುವೆ ,ಸಿದ್ದರಾಮೇಶ್ವರ ಸಮುದಾಯ ಭವನದ ಎಡಭಾಗ ಹಾಗೂ ಬಲಭಾಗದಲ್ಲಿರುವ ರಸ್ತೆಗಳು. ಹೀಗೆ […]

Advertisement

Wordpress Social Share Plugin powered by Ultimatelysocial