ಕೊರೊನಾದಿಂದಾಗಿ ದೇಶವೇ ಲಾಕ್ಡೌನ್ ಮಾಡಿರುವ ಹಿನ್ನಲೆಯಲ್ಲಿ ಜನರು ಕೆಲಸವಿಲ್ಲದೇ, ಆಹಾರವಿಲ್ಲದೇ ಪರದಾಡುವಂತ ಸ್ಥಿತಿ ಉಂಟಾಗಿದೆ. ಕೂಲಿಗಾಗಿ ಊರು ಬಿಟ್ಟು ರಾಜಧಾನಿಗೆ ಬಂದ ಜನರಿಗೆ ಸಂಕಷ್ಟದ ಸ್ಥಿತಿ ಬಂದೋದಗಿದೆ.
ರಾಜಧಾನಿಯಲ್ಲಿ ಐಸ್ಕ್ರೀಂ ಮಾರಿ ಜೀವನ ನಡೆಸುತ್ತಿದ್ದ ಯುವಕರು ಲಾಕ್ಡೌನ್ನಿಂದಾಗಿ ಕೆಲಸ ಸ್ಥಗಿತಗೊಂಡು ಊಟಕ್ಕೆ ಕಷ್ಟ ಪಡುವಂತಾಗಿ, ಮರಳಿ ಊರಿಗೆ ಹೋಗಲು ೨೦ ಯುವಕರು ತೀರ್ಮಾನಿಸಿ ಸೈಕಲ್ ಮೇಲೆ ತಮ್ಮ ಸವಾರಿ ಮುಂದುವರೆಸಿದ್ದಾರೆ.
ರಾಯಚೂರು ಜಿಲ್ಲಾಡಳಿತ ಎಸಿ ಸಂತೋಷ ಕುಮಾರ ಉತ್ತರ ಪ್ರದೇಶಕ್ಕೆ ಹೊರಟ ಯುವಕರನ್ನು ತಡೆದು ಪರೀಕ್ಷಿಸಿದಾಗ ಕೆಮ್ಮು, ನೆಗಡಿ ರೋಗ ಲಕ್ಷಣಗಳು ಕಂಡು ಬಂದಿದ್ದು, ೨೦ಯುವಕರನ್ನು ಕ್ವಾರಂಟೈನ್ಗೆ ಕಳುಹಿಸಿದ್ದಾರೆ.
ಸೈಕಲ್ ಮೇಲೆ ಪ್ರಯಾಣ ಆರಂಭಿಸಿದ ಯುವಕರು
Please follow and like us: