ಗಡಿ ಭಾಗಗಳ ಸೆಕ್ಯೂರಿಟಿ ರಿಯಾಲಿಟಿ ಚೆಕ್ ಮಾಡಲು ಹೊರಟ ನಮಗೆ ನಿಜಕ್ಕೂ ಆಶ್ಚರ್ಯ ಕಾದಿತು.. ಏನಪ್ಪಾ ಅಂದ್ರೆ ಆಂಧ್ರ ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸಿಕೊಡುವ ರಾಷ್ಟ್ರೀಯ ಹೆದ್ದಾರಿ ನಮ್ಮ ಕರ್ನಾಟಕ ಆಂಧ್ರದ ಗಡಿಯಾದ ಪಲಮನೇರು ಚೆಕ್ಪೋಸ್ಟ್ನಲ್ಲಿ ಸಂಜೆ ೭ ರಿಂದ ಬೆಳ್ಳಿಗೆ ೭ ರ ತನಕ ಯಾವುದೇ ತುರ್ತು ವಾಹನಗಳನ್ನು ಮತ್ತು ದಿನ ನಿತ್ಯ ಬಳಕೆಯ ಸರಕು ವಾಹನ ಹೊರತುಪಡಿಸಿ ಬಾರ್ಡರ್ ದಾಟುವ ಹಾಗಿಲ್ಲ..ಹಾಗೂ ಯಾವುದಾದರು ಸಂಬAದಿಕರ ಸಾವಿನ ವಿಚಾರ ಇದ್ದರೂ ಅವರಿಗೆ ವಿಡಿಯೋ ಕಾಲ್ ಮಾಡಿ ನೋಡಿ ಮಾಹಿತಿ ಸಂಗ್ರಹಣೆ ಮಾಡಿ ಗಡಿ ದಾಟುವ ಪ್ರಕ್ರಿಯೆ ತುಂಬಾ ಸುಸರ್ಜಿತವಾಗಿ ಮಾಡುತ್ತಿದೆ.
ಇಲ್ಲಿನ ಆಂಧ್ರ ಸರ್ಕಾರ ಮಾಡಿರಿವ ಕಾನೂನಿಗೆ ಇಷ್ಟೊಂದು ಕಟ್ಟು ನಿಟ್ಟಾಗಿ ಪಾಲನೆ ಮಾಡುವುದರಲ್ಲಿ ಇಲ್ಲಿನ ಜಿಲ್ಲಾಡಳಿತಾ ಸಂಪೂರ್ಣ ಯಶಸ್ವಿಯಾಗಿದೆ. ಇದರಲ್ಲಿ ಆಂಧ್ರ ಅಥವಾ ಕರ್ನಾಟಕದ ಸರ್ಕಾರಿ ಬಸ್ಸಿನಲ್ಲಿ ಬಂದAಥ ಪ್ರಯಾಣಿಕರ ಪ್ರತಿಯೊಬ್ಬರ ಎಲ್ಲರ ಮಾಹಿತಿ ಪಡೆದು ಅವರ ಕೋವಿಡ್ ಟೆಸ್ಟ್ ಗೆ ಒಳಪಡಿಸಿ ಅವರ ಸ್ವಾಬ್ ಪಡೆದು. ಎಲ್ಲ ಮುನ್ನೆಚ್ಚರಿಕೆಯಿಂದ ಅವರನ್ನು ಕಳುಹಿಸಿಕೊಡಲಾಗುತ್ತಿದೆ.. ಈ ರೀತಿ ಪ್ರಯಾಣಿಕರನ್ನು ಕಳುಹಿಸಿ ಅಲ್ಲಿನ ಅಧಿಕಾರಿ ವರ್ಗಕ್ಕೆ ಮಾಹಿತಿ ನೀಡಿ ಅವರನ್ನು ಅವರ ಸ್ಥಳ ದಲ್ಲಿ ೧೮ ದಿನಗಳು ಕ್ವಾರಂಟೈನ್ ಮಾಡುವ ಕಟ್ಟು ನಿಟ್ಟಿನ ಕ್ರಮವನ್ನು ಆಂಧ್ರ ಸರ್ಕಾರ ಮಾಡುತ್ತಿದೆ..