ಸ್ಪೀಡ್ ನ್ಯೂಸ್‌ನ ಗಡಿ ರಿಯಾಲಿಟಿ ಚೆಕ್- ಬಯಲಾಯ್ತು ಆಶ್ಚರ್ಯದ ಸಂಗತಿ

ಗಡಿ ಭಾಗಗಳ ಸೆಕ್ಯೂರಿಟಿ ರಿಯಾಲಿಟಿ ಚೆಕ್ ಮಾಡಲು ಹೊರಟ ನಮಗೆ ನಿಜಕ್ಕೂ ಆಶ್ಚರ್ಯ ಕಾದಿತು.. ಏನಪ್ಪಾ ಅಂದ್ರೆ ಆಂಧ್ರ ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸಿಕೊಡುವ ರಾಷ್ಟ್ರೀಯ ಹೆದ್ದಾರಿ ನಮ್ಮ ಕರ್ನಾಟಕ ಆಂಧ್ರದ ಗಡಿಯಾದ ಪಲಮನೇರು ಚೆಕ್‌ಪೋಸ್ಟ್ನಲ್ಲಿ ಸಂಜೆ ೭ ರಿಂದ ಬೆಳ್ಳಿಗೆ ೭ ರ ತನಕ ಯಾವುದೇ ತುರ್ತು ವಾಹನಗಳನ್ನು ಮತ್ತು ದಿನ ನಿತ್ಯ ಬಳಕೆಯ ಸರಕು ವಾಹನ ಹೊರತುಪಡಿಸಿ ಬಾರ್ಡರ್ ದಾಟುವ ಹಾಗಿಲ್ಲ..ಹಾಗೂ ಯಾವುದಾದರು ಸಂಬAದಿಕರ ಸಾವಿನ ವಿಚಾರ ಇದ್ದರೂ ಅವರಿಗೆ ವಿಡಿಯೋ ಕಾಲ್ ಮಾಡಿ ನೋಡಿ ಮಾಹಿತಿ ಸಂಗ್ರಹಣೆ ಮಾಡಿ ಗಡಿ ದಾಟುವ ಪ್ರಕ್ರಿಯೆ ತುಂಬಾ ಸುಸರ್ಜಿತವಾಗಿ ಮಾಡುತ್ತಿದೆ.

 

ಇಲ್ಲಿನ ಆಂಧ್ರ ಸರ್ಕಾರ ಮಾಡಿರಿವ ಕಾನೂನಿಗೆ ಇಷ್ಟೊಂದು ಕಟ್ಟು ನಿಟ್ಟಾಗಿ ಪಾಲನೆ ಮಾಡುವುದರಲ್ಲಿ ಇಲ್ಲಿನ ಜಿಲ್ಲಾಡಳಿತಾ ಸಂಪೂರ್ಣ ಯಶಸ್ವಿಯಾಗಿದೆ. ಇದರಲ್ಲಿ ಆಂಧ್ರ ಅಥವಾ ಕರ್ನಾಟಕದ ಸರ್ಕಾರಿ ಬಸ್ಸಿನಲ್ಲಿ ಬಂದAಥ ಪ್ರಯಾಣಿಕರ ಪ್ರತಿಯೊಬ್ಬರ ಎಲ್ಲರ ಮಾಹಿತಿ ಪಡೆದು ಅವರ ಕೋವಿಡ್ ಟೆಸ್ಟ್ ಗೆ ಒಳಪಡಿಸಿ ಅವರ ಸ್ವಾಬ್ ಪಡೆದು. ಎಲ್ಲ ಮುನ್ನೆಚ್ಚರಿಕೆಯಿಂದ ಅವರನ್ನು ಕಳುಹಿಸಿಕೊಡಲಾಗುತ್ತಿದೆ.. ಈ ರೀತಿ ಪ್ರಯಾಣಿಕರನ್ನು ಕಳುಹಿಸಿ ಅಲ್ಲಿನ ಅಧಿಕಾರಿ ವರ್ಗಕ್ಕೆ ಮಾಹಿತಿ ನೀಡಿ ಅವರನ್ನು ಅವರ ಸ್ಥಳ ದಲ್ಲಿ ೧೮ ದಿನಗಳು ಕ್ವಾರಂಟೈನ್ ಮಾಡುವ ಕಟ್ಟು ನಿಟ್ಟಿನ ಕ್ರಮವನ್ನು ಆಂಧ್ರ ಸರ್ಕಾರ ಮಾಡುತ್ತಿದೆ..

Please follow and like us:

Leave a Reply

Your email address will not be published. Required fields are marked *

Next Post

ಕೃಷ್ಣಾ ನದಿ ನೀರಿನ ಹರಿವು ಹೆಚ್ಚಳ- ಜನರಿಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ

Fri Jul 10 , 2020
ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣೆಯ ಒಡಲು ತುಂಬಿದ್ದು , ನೀರಿನ ಹರಿವು ಹೆಚ್ಚಳವಾಗಿದೆ. ಇದರ ಜೊತೆಗೆ ಮಹಾರಾಷ್ಟçದಿಂದ ಬರುತ್ತಿರುವ ನೀರಿನ ಪ್ರಮಾಣವು ಸಹ ಹೆಚ್ಚಿಗೆಯಾಗಿದೆ. ದೂಧ್‌ಗಂಗಾ ನದಿಯಿಂದ ೧೭,೯೫೨ ಕ್ಯುಸೆಕ್ ಹಾಗೂ ರಾಜಾಪುರದಿಂದ ೫೩,೫೦೦ ಕ್ಯುಸೆಕ್ ನೀರು ಸೇರಿ ಒಟ್ಟು ೭೧,೪೫೨ ಕ್ಯುಸೆಕ್ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣ ನದಿಗೆ ಸೇರುತ್ತಿದೆ.   ನದಿ ತೀರದ ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತವು […]

Advertisement

Wordpress Social Share Plugin powered by Ultimatelysocial