ಹಾಲಿಗೆ ಮುಗಿ ಬಿದ್ದ ಜನರು – ಲಾಠಿ ಪ್ರಹಾರ

ಬೆಂಗಳೂರು ; ಕೊರೊನಾ ವೈರಸ್ ಹರಡುವ ಭೀತಿ ನಡುವೆಯು ಬೆಂಗಳೂರಿನಲ್ಲಿ ಜನ ಸರ್ಕಾರದಿಂದ ಕೊಡುವ ಹಾಲಿಗಾಗಿ ಮುಗಿ ಬಿದಿದ್ದಾರೆ..ನಗರ ಜೀವನಭೀಮಾನಗರ ವಾರ್ಡ್ ನಲ್ಲಿ ಘಟನೆ ನಡೆದಿದೆ..ರಾಜ್ಯ ಸರ್ಕಾರ ಉಚಿತವಾಗಿ ಬಡವರಿಗೆ ಹಾಲು ವಿತರಣೆ ಮಾಡುತ್ತಿದೆ..ಇಂದು ಬೆಳಗ್ಗೆ ಜೀವನಭೀಮಾನಗರ ಬಡವರಿಗೆ ಹಾಲು ವಿತರಿಸುವಾಗ ಜನ ಜಗುಂಳಿಯೇ ಕಂಡು ಬಂದಿದೆ..ಕಿಲೋ ಮೀಟರ್ ಗಟ್ಟಲೇ ಸಾಲಿನಲ್ಲಿ ನಿಂತು ಹಾಲು ಪಡೆಯಲು ಜನ ಮುಗಿ ಬಿದಿದ್ದಾರೆ..ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ..ಜನರು ಸಾಮಾಜಿಕ ಅಂತರ ಕಾಯ್ದು ಕೊಳ್ಳದೇ ಇರೋದು ನೋಡುದ್ರೆ ಕೊರೊನಾ ಹರಡುವ ಭೀತಿ ಎದುರಾಗಿದೆ..ನೂರಾರು ಸಂಖ್ಯೆಯಲ್ಲಿ ಏಕಾಏಕಿ ಬಂದಿದ್ದರಿಂದ ನುಕ್ಕೂ ನುಗ್ಗಲು ಆಗಿದೆ..ಜೀವನ ಭೀಮಾನಗರ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ ಎನ್ನಲಾಗಿದೆ

Please follow and like us:

Leave a Reply

Your email address will not be published. Required fields are marked *

Next Post

ರಾಮನಗರಕ್ಕೆ ಕೊರೊನಾ ಹರಡಿದ ರಾಜ್ಯ ಸರ್ಕಾರ

Fri Apr 24 , 2020
ರಾಮನಗರ ; ರಾಮ ನಗರ ಕಾರಾಗೃಹದಲ್ಲಿ ಇರಿಸಲಾಗಿದ್ದ, ಪಾದರಾಯನಪುರದ ಗ ಆರೋಪಿಗಳ ಪೈಕಿ ಇಬ್ಬರಿಗೆ ಕೊರೋನಾ ವೈರಸ್ ತಗುಲಿರುವ ಪಾಸಿಟಿವ್ ವರದಿ ಬಂದಿದೆ. ರಾಮನಗರ ಜೈಲಿನಲ್ಲಿ ಇರಿಸಲಾಗಿರುವ ಕೈದಿಗಳನ್ನು ಸಕಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತಕ್ಷಣವೇ ಸ್ಥಳಾಂತರಿಸದಿದ್ದರೆ ನಾಳೆಯಿಂದ ಉಗ್ರ ಪ್ರತಿಭಟನೆ ಮಾಡುತ್ತೇನೆ. ಈ ಹಿಂದೆಯೇ ನಾನು ಇದೇ ವಿಷಯವಾಗಿ ಸರ್ಕಾರದ ಗಮನ ಸೆಳೆದರೂ ನಿರ್ಲಕ್ಷಿಸಿದರ ಫಲವಾಗಿ ಇಂದು ರಾಮನಗರಕ್ಕೂ ಕೊರೋನಾ ವೈರಸ್ ವಕ್ಕರಿಸಿದೆ. ಪಾಸಿಟಿವ್ ಬಂದ ಇಬ್ಬರ ಜತೆಯಲ್ಲಿದ್ದ ಏಳೆಂಟು ಮಂದಿಯನ್ನು […]

Advertisement

Wordpress Social Share Plugin powered by Ultimatelysocial