ಹುಣಸೂರಲ್ಲಿ: ಗುಂಡೇಟಿಗೆ ಕಾಡಾನೆಯ ಬಲಿ

ಹುಣಸೂರು: ಗುಂಡೇಟಿಗೆ ಕಾಡಾನೆಯೊಂದು ಬಲಿಯಾಗಿರುವ ಘಟನೆ ನಾಗರಹೊಳೆ ಉದ್ಯಾನದ ಆನೆಚೌಕೂರು ಮೀಸಲು ಅರಣ್ಯದಂಚಿನ ಸೂಳಗೋಡು ಗ್ರಾಮದಲ್ಲಿ

ನಡೆದಿದೆ.

ಕಾಡಂಚಿನಿಂದ ಸುಮಾರು 500 ಮೀಟರ್ ದೂರದ ಪಿರಿಯಾಪಟ್ಟಣ ತಾಲೂಕಿನ ಸೂಳಗೋಡು ಗ್ರಾಮದ ಚಿಕ್ಕೇಗೌಡರ ಪುತ್ರ ರೇವಣ್ಣರ ಜಮೀನಿನಲ್ಲಿ ಸುಮಾರು 20 ವರ್ಷದ ಹೆಣ್ಣಾನೆ ಶವ ಪತ್ತೆಯಾಗಿದೆ.

ನಾಗರಹೊಳೆ ಉದ್ಯಾನದಿಂದ ಹುಣಸೂರು ವನ್ಯಜೀವಿ ವಲಯ ವ್ಯಾಪ್ತಿಯಿಂದ ಆಹಾರ ಹುಡುಕಿಕೊಂಡು ನಾಡಿಗೆ ಬಂದಿದ್ದ ಸುಮಾರು 4-5 ಆನೆಗಳ ಹಿಂಡಿನಲ್ಲಿದ್ದ ಈ ಹೆಣ್ಣಾನೆಗೆ ಗುಂಡೇಟು ತಗುಲಿದ್ದು, ಸಾವನ್ನಪ್ಪಿದೆ.

ವಿಷಯ ತಿಳಿದು ಆರ್.ಎಫ್.ಓ. ಹನುಮಂತರಾಜು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿದ್ದಾರೆ. ಪಶುವೈದ್ಯ ಡಾ.ರಮೇಶ್ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆಂದು ಎಸಿಎಫ್ ಸತೀಶ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆರ್‌ ಅಶೋಕ್‌ ಹೇಳಿಕೆ ಶೀಘ್ರವೇ 10-15 ಜನ ಕಾಂಗ್ರೆಸ್‌ ಬಿಟ್ಟು ಹೊಗುತ್ತಾರೆ

Sat Jan 29 , 2022
  ಬೆಂಗಳೂರು : ಕಾಂಗ್ರೆಸ್ ಪಕ್ಷವೇ ಮನೆಯೊಂದು ಮೂರು ಬಾಗಿಲಾಗಿದೆ. 10-15 ಮಂದಿ ಕಾಂಗ್ರೆಸ್ ತೊರೆಯಲಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಖಾಲಿಯಾಗುವ ಪರಿಸ್ಥಿತಿ ಕಾಣಿಸುತ್ತಿದೆ. ಅವರನ್ನು ಉಳಿಸಿಕೊಳ್ಳುವ ವಿಶ್ವಾಸ ಇಟ್ಟುಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಮನೆ ಖಾಲಿಯಾಗುತ್ತಿದೆ. ಶೀಘ್ರವೇ 10-15 ಜನರು ಕಾಂಗ್ರೆಸ್ ತೊರೆಯಲಿದ್ದಾರೆ ಎಂದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಂಪರ್ಕದಲ್ಲಿ 20 ಜನ ಇದ್ದಾರೆ ಎಂದು […]

Advertisement

Wordpress Social Share Plugin powered by Ultimatelysocial