ಹೆಚ್ ಡಿಕೆ ಪರ ಹೆಚ್ ,ಕೆ.ಪಾಟೀಲ್ ಬ್ಯಾಟಿಂಗ್

ಗದಗ: ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರದ ಭದ್ರತೆ ಬಗ್ಗೆ ಕಾಳಜಿ ವಹಿಸಿದ್ದು ತಪ್ಪಲ್ಲ. ಎಂದು ಶಾಸಕ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. ಗದಗನಲ್ಲಿ ಪಾದರಾಯನಪುರ ಆರೋಪಿಗಳ ಸ್ಥಳಾಂತರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರದ ಭದ್ರತೆ ಬಗ್ಗೆ ಕಾಳಜಿ ವಹಿಸಿದ್ದು ತಪ್ಪಲ್ಲ. ಗ್ರೀನ್ ಝೋನ್ ಜಿಲ್ಲೆಗೆ ಆರೋಪಿಗಳನ್ನು ಸ್ಥಳಾಂತರಿಸಿದ್ದು ತಪ್ಪು. ಹಾಗಾಗಿ ರಾಮನಗರ ಜನರ ಹಿತದೃಷ್ಟಿಯಿಂದ ಕುಮಾರಸ್ವಾಮಿ ಹೇಳಿಕೆ ಸರಿಯಿದೆ. ಇದು ರಾಜಕೀಯ ಅನ್ನೋದು ಸರಿಯಲ್ಲ ಎಂದು ಹೆಚ್​ಡಿಕೆ ಪರ‌ ​ ಬ್ಯಾಟ್​​​ ಬೀಸಿದರು.‌ ಕೊರೊನಾ ಟೆಸ್ಟ್‌ ಕಿಟ್ ಬಳಕೆಗೆ ಯೋಗ್ಯವಲ್ಲಾ ಎಂದು ಐಸಿಎಂಆರ್ ಹೇಳಿದೆ. ಆದ್ರೂ, ಅಂತಹ ಕಿಟ್ ಖರೀದಿಗೆ ಆದೇಶ ಕೊಟ್ಟವರು ಯಾರು? ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಳಪೆ ವಸ್ತುಗಳನ್ನು ಸರಬರಾಜು ಮಾಡಿದವರು ಯಾರು? ಈ ಕುರಿತು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು. ಇದರ ಹಿಂದಿನ ಉದ್ದೇಶವಾದರೂ ಏನು? ತಕ್ಷಣ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಹೇಳಿದರು.

 

Please follow and like us:

Leave a Reply

Your email address will not be published. Required fields are marked *

Next Post

ಬಡವರಿಗೆ ಸಹಾಯ ಹಸ್ತ ನೀಡಿದ ಸುಬ್ರಹ್ಮಣ್ಯ ನಾಯ್ಡು

Sat Apr 25 , 2020
ಲಾಕ್‌ಡೌನ್ ಹಿನ್ನಲೆಯಲ್ಲಿ ಬಡವರಿಗೆ ಕಷ್ಟದ ಪರಿಸ್ಥಿತಿ ಉಂಟಾಗಿದೆ. ಅಂತಹವರಿಗೆ ಕೆಲವೊಂದಿಷ್ಟು ಜನರು ಸಹಾಯ ಮಾಡುತ್ತಿದ್ದಾರೆ. ಹೆಬ್ಬಾಳದ ಸುಮಾರು ೪೫೦ ಅರ್ಚಕರಿಗೆ ಮಾಜಿ ಸಚಿವ ಕಟ್ಟ ಸುಬ್ರಹ್ಮಣ್ಯ ನಾಯ್ಡು ಆಹಾರ ಹಾಗೂ ತರಕಾರಿ ಕಿಟ್ ವಿತರಿಸಿದರು. ಹಿರಿಯ ನಾಗರಿಕರಿಗೆ ಮತ್ತು ಸಾವಿರಾರು ಜನರಿಗೆ ಪ್ರತಿನಿತ್ಯ ಊಟ ಹಂಚುತ್ತಿದ್ದಾರೆ ಇವರ ಕಾರ್ಯಕ್ಕೆ ಬಸವರಾಜ ಬೊಮ್ಮಾಯಿ ಕೂಡ ಸಾಥ್ ನೀಡಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial