ಹೈಟೆಕ್ ವಿದೇಶಿ ಕಳ್ಳರ ಜಾಲ ಭೇದಿಸಿದ ಪೋಲೀಸರು

ನಗರದ ವಿವಿಧ ಮನೆಗಳಲ್ಲಿ ಹೈಟೆಕ್ ಕಳ್ಳತನ ಮಾಡುತ್ತಿದ್ದ ವಿದೇಶಿಗರನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ. ವಿದೇಶಿಗರು ನಗರದಲ್ಲಿ ವಾಸಿಸಿಕೊಂಡು ನಗರದ ಹಲವು ಮನೆಗಳಿಗೆ ಹೈಟೆಕ್ ತಂತ್ರಜ್ಞಾನವನ್ನು ಬಳಸಿ ದರೋಡೆ ನಡೆಸುತ್ತಿದ್ದ ಜಾಲವನ್ನು ಪೋಲೀಸರು ಪತ್ತೆ ಹಚ್ಚಿದ್ದಾರೆ. ಶ್ರೀಲಂಕಾ ಕೊಲಂಬಿಯಾ ನಿವಾಸಿಗಳಾಗಿದ್ದು, ವಿಲಿಯನದ ಪಡಿಲ್ಲ ,ಲೇಡಿ ಸ್ಟೆಫಾನಿಯಾ ,ಕ್ರಿಶ್ಚಿಯನ್ ಯೀನೀಸ್ ನವರೋ ಒಲರ‍್ಥೆ ಎಂಬ ವಿದೇಶಿ ಕಳ್ಳರನ್ನು ಪೋಲೀಸರು ಬಂಧಿಸಿದ್ದಾರೆ. ಇನ್ನು ಬಂಧಿತರು ನಟ ಶಿವರಾಜ್ ಕುಮಾರ್ ರವರ ಪಕ್ಕದ ಮನೆಯಲ್ಲೂ ಕಳ್ಳತನ ಮಾಡಿದ್ದರು ಎನ್ನಲಾಗಿದೆ. ಎಂತಹ ಬಿಲ್ಡಿಂಗ್ ನ್ನೂ ಹತ್ತಬಹುದಾದಂತಹ ಪರ‍್ಕೋರ್ ಎಂಬ ವಿದ್ಯೆಯನ್ನ ಕಲಿತಿದ್ದ ಕಳ್ಳರು, ಲ್ಯಾಪ್ ಟ್ಯಾಪ್, ಮೊಬೈಲ್ ಫೋನ್ ಬಿಟ್ಟು ಉಳಿದೆಲ್ಲವನ್ನೂ ಕದಿಯುತ್ತಿದ್ದರು. ೨೦೧೯ರಲ್ಲಿ ಯಲಹಂಕ ನ್ಯೂಟೌನ್ ನ ಯೂಕೋ ಬ್ಯಾಂಕ್ ದರೋಡೆಗೆ ಸಂಚು ರೂಪಿಸಿದ್ದ ಇವರು, ನಗರದಲ್ಲಿ ೩೦ ಕ್ಕೂ ಹೆಚ್ಚು ಮನೆಗಳ್ಳತನ ಮಾಡಿದ್ದಾರೆ. ಇನ್ನು ಸ್ಪಾನಿಷ್ ಭಾಷೆ ಬಿಟ್ಟರೆ ಬೇರೆ ಭಾಷೆ ಬಾರದ ಕಳ್ಳರು. ನೇಪಾಳ ಮೂಲಕ ಶ್ರೀಲಂಕಾದಿಂದ ಭಾರತಕ್ಕೆ ಬರುತ್ತಿದ್ದರು. ಕೊತ್ತನೂರು ಸಂಪಿಗೆಹಳ್ಳಿ ಸೇರಿದಂತೆ ನಗರದ ವಿವಿಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳಿಂದ ೬.೫ ಕೇಜಿ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಯಡಿಯೂರಪ್ಪ ನಮ್ಮ ಪಕ್ಷದ ಪ್ರಶ್ನಾತೀತ ನಾಯಕ

Thu Jul 30 , 2020
ಹಲವು ರ‍್ಷಗಳಿಂದ ನಾನು ರಾಜಕೀಯದಲ್ಲಿ ಇದ್ದೇನೆ, ಯಡಿಯೂರಪ್ಪ ನೇತೃತ್ವದ ರ‍್ಕಾರ ಒಂದು ರ‍್ಷ ಪುರೈಸಿದೆ. ಯಡಿಯೂರಪ್ಪ ನಮ್ಮ ಪಕ್ಷದ ಪ್ರಶ್ನಾತೀತ ನಾಯಕ. ಅವರ ಹೆಸರಿನಲ್ಲಿಯೇ ಪ್ರಣಾಳಿಕೆ ಮಾಡಿ ಅವರ ನಾಯಕತ್ವದಲ್ಲಿಯೇ ಚುನಾವಣೆ ಎದುರಿಸಿದ್ದೇವೆ. ಅವರ ನೇತೃತ್ವದಲ್ಲಿ ಒಂದು ರ‍್ಷದಲ್ಲಿ ಬಂದಿರುವ ಸಂಕಷ್ಟಗಳನ್ನು ಸರ‍್ಥವಾಗಿ ನಿಭಾಯಿಸಿದ್ದಾರೆ. ಪ್ರಕೃತಿ ವಿಕೋಪ ಕೊವಿಡ್ ಸಮಸ್ಯೆ ಎಲ್ಲವನ್ನು ಹತೋಟಿಗೆ ತರಲು ಪ್ರಯತ್ನಿಸಿದ್ದಾರೆ. ನಾವು ಅನಗತ್ಯವಾಗಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುವುದು ಬೇಡ, ಅವರ ನಾಯಕತ್ವದಲ್ಲಿಯೇ […]

Advertisement

Wordpress Social Share Plugin powered by Ultimatelysocial