ವಿಶ್ವದಲ್ಲೇ ಕೊರೊನಾ ವೈರಸ್ ಮಹಾಮಾರಿ ಹರಡುತ್ತಿದೆ.ಇದರ ಸಲುವಾಗಿ ಕೊರೊನಾ ಮಹಾಮಾರಿ ತಡೆಗಟ್ಟುವುದಕ್ಕೆ ಭಾರತದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು ಆದರೆ ಏಪ್ರಿಲ್ ತಿಂಗಳವೊಂದರಲ್ಲೇ 12 ಕೋಟಿ ಜನರು ಕೆಲಸವನ್ನು ಕಳೆದುಕೊಡಿದ್ದಾರೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಈ ಅಧ್ಯಯನದ ವರದಿಯನ್ನು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಎಂಬ ಖಾಸಗಿ ಸಂಸ್ಥೆಯು ವಿಷಯ ತಿಳಿಸಿದೆ. ದಿನಗೂಲಿ ಕಾರ್ಮಿಕರು, ಸಣ್ಣಪುಟ್ಟ ಕೆಲಸ ಮಾಡುತ್ತಿದ್ದವರು, ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳು, ಹಾಗೂ ಆಟೋರಿಕ್ಷಾ ಚಾಲಕರು ಸೇರಿದ್ದಾರೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ