200 ಕೋಟಿ ಜೀವನಾಂಶ ವಲ್ಲೆ ಅಂದ ಸ್ಯಾಮ್ – ಸೆಲ್ಫ್‌ ಮೇಡ್‌ ವುಮೆನ್‌..!

ಲವ್‌ ,ಈ ಪದ ಕೇಳುದ್ರೆ ರೊಮಾಂಚನ ಆಗುತ್ತೆ .ಇನ್ನು ನಾವು ಇಷ್ಟಪಟ್ಟು ಲವ್‌ ಮಾಡಿದವರನ್ನೇ  ಮದುವೆ ಆದರೆ ಬಾಯಿಗೆ ಬಂದು ಲಡ್ಡು ಬಿದ್ದಂತೆ. ಸ್ವರ್ಗಕ್ಕೆ ಮೂರೇ ಗೇನು .ಲವ್‌ ಮಾಡಿ ಮದುವೆ ಆದರೆ ಸಾಲದು ಆ ಪವಿತ್ರ ಭಾಂದವ್ಯವನ್ನ ಎಂತ ದುಸ್ತಿತಿ ಬಂದ್ರು ಉಳಿಸಿಕೊಂಡು ಮುಂದೊರೆಯುವ ತಾಕತ್ತು ಸಂಸಾರವೆನ್ನುವ ಬಂಡಿಯನ್ನು ಜೊಡೆತ್ತು ಸಾಗಿಸೊ ಹಾಗೆ ದಂಪತಿಗಳ ಪಯಣ ಸಾಗಬೇಕು.

ಆದರೆ ಇತ್ತೀಚಿನ ದಿನಗಳಲ್ಲಿ  ಲವ್‌ ಅನ್ನೊದು ಜಸ್ಟ್‌ flirt .ಇನ್ನು ಪ್ರೀತಿ ಪ್ರೇಮ ಅಂತ ನಂಬಿ ಮದುವೆಯಾಗಿ ಕೊನೆಗೆ ವಿಚ್ಛೇಧನ ಕೊಡೊದು ಕಾಮನ್‌ ಅನ್ನೊಕಿಂತ ಟ್ರೇಂಡ್‌ ಅಂತನೇ ಹೇಳಬೋದು. ಹಾಗಂತ ಲವ್‌ ಮ್ಯಾರೇಜ್‌ ಆದವರೆಲ್ಲಾ ಹೀಗೆ ಅಂತನೂ ಹೇಳೊಕೆ ಆಗಲ್ಲ . ದಕ್ಷಿಣ ಭಾರತದ ಕ್ಯೂಟ್‌ ಕಪಲ್‌ ಅಂದರೇ ಸಾಕು ತಟ್‌ ಅಂತ ಬಂದು ಹೋಗೊದೆ ಟಾಲಿವುಡ್‌ ನಟ ನಾಗ ಚೈತನ್ಯ  ಹಾಗೂ ನಟಿ ಸಮಂತಾ. ಎಸ್‌ ಇವರಷ್ಟು ಕ್ಯೂಟಿಪೈ ಕಪಲ್ಸ್‌ ಇಲ್ಲ ಬಿಡ್ರಿ. ಯಾವ ಮಾರಿ ಕಣ್ಣು ಬಿತ್ತೊ ಈ ಮುದ್ದಾದ ಜೋಡಿ ಮೇಲೆ ಏನ್‌ ಆಗಬಾರದು ಅನ್ಕೊಂಡಿದವೊ ಅದೇ ಆಗಿ ಹೋಯಿತು. ನ್ಯಾಮ್‌ ಮತ್ತು ನಾಗಚೈತನ್ಯ ಮದುವೆಯಾಗಿ 4 ವರ್ಷಗಳು ಆಗಿವೆ ಅದೇನಾಯಿತೊ ಈ ದಾಂಪತ್ಯಕ್ಕೆ ? 4ವರ್ಷಗಳ ಪಯಣಕ್ಕೆ ಪುಲ್ ಸ್ಟಾಪ್‌ ಕೊಟ್ಟಿದ್ದಾರೆ .ಹೌದು ಈ ಸ್ಟಾರ್‌ ಕಪಲ್ಸ್‌ ಅಧಿಕೃತವಾಗಿ ವಿಚ್ಛೇಧನ  ಘೋಷಿಸಿದ್ದಾರೆ .ತಮ್ಮ ಇನ್ಟಾ ಹಾಗೂ ಟ್ವಿಟರ್‌ ಕಾತೆಯಲ್ಲಿ ಪೋಸ್ಟ್‌ ಮಾಡುವುದರ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿ ತಮ್ಮ ದಾಂಪತ್ಯಕ್ಕೆ ಏಳ್ಳು ನೀರು ಬಿಟ್ಟಿದ್ದಾರೆ.

ಸೆಲೆಬ್ರಿಟಿಗಳ ಡಿವೊರ್ಸ್‌ ಆದಗೆಲ್ಲಾ ಪರಿಹಾರ ಮೊತ್ತದ ಚರ್ಚೆ ಬಂದೇ ಬರುತ್ತದೆ. ಪರಿಹಾರ ಅಥವಾ ಜೀವನಾಂಶ ಹಣಕ್ಕಾಗಿಯೇ ಕೆಲ ಸೆಲೆಬ್ರಿಟಿಗಳು ವಿಚ್ಛೇಧನ ಪಡೆದಿದ್ದು ಉಂಟು. ಇದೀಗ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇಧನದಲ್ಲಿಯೂ ಜೀವನಾಂಶ ಮೊತ್ತ ಎಷ್ಟಿರಬಹುದು ? ಎಷ್ಟು ಹಣ ಹಾಗೂ ಆಸ್ತಿಯನ್ನು ನಾಗ ಚೈತನ್ಯ ಸಮಂತಾಗೆ ಕೊಡಬೇಕಾಗಬಹುದು? ಇದೀಗ ವೈರಲ್ ಆಗಿರುವ ಸುದ್ದಿಯ ಪ್ರಕಾರ, ನಿಯಮದ ಪ್ರಕಾರ ಸುಮಾರು 200 ಕೋಟಿ ಜೀವನಾಂಶ ಅಥವಾ ಪರಿಹಾರ ಮೊತ್ತವನ್ನು ನಾಗ ಚೈತನ್ಯ, ಸಮಂತಾಗೆ ಕೊಡಬೇಕಾಗಿದೆ. ಆದರೆ ಸ್ವಾಭಿಮಾನಿ ಸಮಂತಾ ಆ ಹಣವನ್ನು ಬೇಡವೆಂದಿದ್ದಾರೆ. ನಾಗ ಚೈತನ್ಯ, ಪರಿಹಾರ ಮೊತ್ತವನ್ನು ನೀಡಲು ತಯಾರಾಗಿದ್ದರಂತೆ ಆದರೆ ಸಮಂತಾ, ತಮಗೆ ಯಾವುದೇ ಹಣ ಬೇಡ ಎಂದು ಹೇಳಿದ್ದಾರೆ. ಆ ಮೂಲಕ ತಮ್ಮ ಸ್ವಾಭಿಮಾನವನ್ನು ಜಗಜ್ಜಾಹೀರು ಮಾಡಿದ್ದಾರೆ. ಸಮಂತಾರ ಈ ನೇರ ಆಲೋಚನೆ ಹಾಗೂ ದಿಟ್ಟ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ಕೇಳಿ ಬರುತ್ತಿದೆ.

ಸಮಂತಾ ಟಾಲಿವುಡ್‌ನ ಬಹು ಡಿಮ್ಯಾಂಡೆಡ್‌ ನಟಿ. ಮದುವೆ ಆಗಿದ್ರು ಸಾಲು-ಸಾಲು ಸಿನಿಮಾಗಳ ಆಫರ್‌ಗಳು ಸಮಂತಾಗೆ ಬರುತ್ತಲೇ ಇದೆ. ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸಿರೀಸ್ ನಲ್ಲಿ ಸ್ಯಾಮ್‌ ನಟನೆ ಕೊಂಡಾಡಿದವರಿಲ್ಲ . ಆದರೆ ಈ ಸಿರೀಸ್ನಲ್ಲಿ ಕಂಡು ಬಂದ ಕೆಲ ದೃಶ್ಯಗಳಿಂದ ಸ್ಯಾಮ್‌ ಹಾಗು ನಾಗ ಚೈತನ್ಯ ದಾಂಪತ್ಯದಲ್ಲಿ ಬಿರುಕು ಬಂದಿರಬಹುದು ಎಂಬ ಊಹ ಪೊಹಗಳು ಕೇಳಿ ಬಂದಿವೆ . ನೇರ ನುಡಿ ಹಾಗೂ ವಿಭಿನ್ನ ಮ್ಯಾನರಿಸಂ ನಿಂದ ಖ್ಯಾತಿ ಪಡೆದಿರುವ ರಾಮ್ ಗೋಪಾಲ್ ವರ್ಮಾ ಸಮಂತಾ ಅಕ್ಕಿನೇನಿ ಹಾಗೂ ನಾಗಚೈತನ್ಯ ಡೈವೋರ್ಸ್ ನೀಡಿರುವ ಬೆನ್ನಲ್ಲೇ ತಮ್ಮದೇ ಸ್ಟೈಲ್ ನಲ್ಲಿ ಟ್ವೀಟ್ ಮಾಡಿದ್ದಾರೆ. “ವಿಚ್ಛೇದನಗಳನ್ನು ಸಂಭ್ರಮಿಸಬೇಕು” ಎನ್ನುವ ಕಾಮೆಂಟ್ ಮಾಡಿ ಎಲ್ಲರ  ಮೆದುಳಿಗೆ ಕೈ ಹಾಕಿದ್ದಾರೆ.

 

ಇನ್ನು ಮಗ ನಾಗ ಚೈತನ್ಯ ಮತ್ತು ಸೊಸೆ ಸಮಂತಾ ಅಕ್ಕಿನೇನಿ ವಿಚ್ಛೇಧನವನ್ನು ಘೋಷಿಸಿದ ನಂತರ ಟಾಲಿವುಡ್ ನಟ ನಾಗಾರ್ಜುನ ಅಕ್ಕಿನೇನಿ ಭಾರವಾದ ಹೃದಯದಿಂದ ನಾನು ಇದನ್ನು ಹೇಳುತ್ತೇನೆ! ಸ್ಯಾಮ್ ಮತ್ತು ಚಾಯ್ ನಡುವೆ ಏನೇ ನಡೆದರೂ ಅದು ದುರದೃಷ್ಟಕರ. ಪತಿ ಮತ್ತು ಪತ್ನಿ ನಡುವೆ ಏನಾಗುತ್ತದೆ ಎಂಬುದು  ವೈಯಕ್ತಿಕವಾಗಿದೆ. ದೇವರು ಅವರಿಬ್ಬರಿಗೂ ಶಕ್ತಿಯನ್ನು ನೀಡಲಿ ಎಂದು ನಾಗಾರ್ಜುನ ಅಕ್ಕಿನೇನಿ ಪೊಸ್ಟ್‌ ಹಂಚಿಕೊಂಡಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಚಾಹಲ್ ಹೆಸರಿಗೆ ವಿಶೇಷ ದಾಖಲೆ : ದುಬೈ ಅಂಗಳದಲ್ಲಿ ದಾಖಲೆ ವೀರನಾದ ಚಾಹಲ್

Mon Oct 4 , 2021
ಆರ್‌ಸಿಬಿ  ತಂಡದ ಲೆಗ್ ಸ್ಪಿನ್ನರ್ ಯುಜುವೇಂದರ್‌ ಚಾಹಲ್ ಐಪಿಎಲ್‌ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಭಾನುವಾರ  ನಡೆದ 48ನೇ ಟಿ-20  ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ಚಾಹಲ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಯುಜುವೇಂದ್ರ ಚಾಹಲ್ ಮೂರು ವಿಕೆಟ್ ಪಡೆದುಕೊಂಡಿದ್ದಾರೆ., ಮಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್ ಮತ್ತು ಶಾರುಖ್ ಖಾನ್ ವಿಕೆಟ್‌ಗಳು ಚಾಹಲ್‌ಗೆ ಲಭಿಸಿದೆ.     […]

Advertisement

Wordpress Social Share Plugin powered by Ultimatelysocial